ಹುಬ್ಬಳ್ಳಿ: ಡಿ.ಕೆ ಶಿವಕುಮಾರ ಬಂಧನ ವಿರೋಧಿಸಿ ರಾಜ್ಯದ ಅನೇಕ ಕಡೆ ಪ್ರತಿಭಟನೆ ನಡೆಸಲಾಗ್ತಿದೆ. ಆದ್ರೆ, ಶಾಂತಿಯುತವಾಗಿ ನಡೆಯಬೇಕಾದ ಪ್ರತಿಭಟನೆ ಹಿಂಸೆಯಿಂದ ಕೂಡಿದೆ. ಇದಕ್ಕೆ ಸಾಕ್ಷಿಯಾಗಿ ಬಸ್ ಗಳಿಗೆ ಬೆಂಕಿ ಹಚ್ಚಿರುವುದು, ಗ್ಲಾಸ್ ಒಡೆದು ಹಾಕಿರುವ ಘಟನೆಗಳು ನಡೆದಿವೆ.
ಈ ಬಗ್ಗೆ ಹುಬ್ಬಳ್ಳಿಯಲ್ಲಿ ಮಾತ್ನಾಡಿದ ಮಾಜಿ ಸಿಎಂ ಸಿದ್ದರಾಮಯ್ಯನವರು, ನಮ್ಮವರು ಶಾಂತಿಯುತ ಪ್ರತಿಭಟನೆ ಮಾಡ್ತಿದ್ದಾರೆ. ಹಿಂಸಾತ್ಮಕ ಪ್ರತಿಭಟನೆ ನಡೆಸಿದವರು ನಮ್ಮವರಲ್ಲ ಅಂತಾ ಹೇಳಿದ್ರು. ನಮ್ಮವರ ನಡುವೆ ಕೆಲವು ಕಿಡಿಗೇಡಿಗಳು ಸೇರಿಕೊಂಡು ಹೀಗೆ ಮಾಡಿದ್ದಾರೆ ಅಂತಾ ಹೇಳಿದ್ರು.
ಇದೇ ವೇಳೆ ಪ್ರವಾಹದ ಬಗ್ಗೆ ಮಾತ್ನಾಡಿದ ಅವರು, ನೆರೆಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಬೆಳೆ ಪರಿಹಾರ ಹಾಗೂ ಮನೆ ಪರಿಹಾರ ಜನರಿಗೆ ತಲುಪುತ್ತಿಲ್ಲ ಅಂತಾ ಆಕ್ರೋಶ ವ್ಯಕ್ತಪಡಿಸಿದ್ರು.