ಪ್ರಜಾಸ್ತ್ರ ಸುದ್ದಿ
ಹುಬ್ಬಳ್ಳಿ: ಕನ್ನಡಪರ ಸಂಘಟನೆಗಳಲ್ಲಿ ಬಂದ್ ಕೈ ಬಿಡಲು ಮನವಿ ಮಾಡಿಕೊಳ್ಳುತ್ತೇನೆ. ಅವರು ಇಚ್ಛೆಯಂತೆ ಹಲವಾರು ನಿರ್ಣಯಗಳನ್ನು ತೆಗೆದುಕೊಂಡಿದ್ದೇವೆ. ಯಾರು ಕನ್ನಡ ದ್ರೋಹಿಗಳಿದ್ದಾರೋ ಅವರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು.
ಕಾನೂನಾತ್ಮಕವಾಗಿ ಎಂಇಎಸ್ ವಿರುದ್ಧ ತನಿಖೆ ಮಾಡಲಾಗುತ್ತಿದೆ. ಬಂದ್ ಎಲ್ಲದಕ್ಕೂ ಉತ್ತರವಲ್ಲ. ಈಗಾಗ್ಲೇ ಕೋವಿಡ್ ನಿಂದ ಜನರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಬಂದ್ ಕೈ ಬಿಟ್ಟು ಬೇರೆ ಏನೇ ರೀತಿಯ ಒತ್ತಡ ಹಾಕಿದರೂ ಸರಿ. ಬಂದ್ ಬೇಡ ಎಂದು ಕಳಕಳಿಯ ಮನವಿ ಮಾಡಿಕೊಳ್ಳುತ್ತೇನೆ ಎಂದರು.