ಪ್ರಜಾಸ್ತ್ರ ಸುದ್ದಿ
ಧಾರವಾಡ: ಧಾರವಾಡ ಕೆಯುಡಿ ಮೈದಾನದಲ್ಲಿ ನಡೆದ ಧಾರವಾಡ ಪ್ರೀಮಿಯರ್ ಲೀಗ್(ಡಿಪಿಎಲ್) ಕ್ರಿಕೆಟ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರಪಾಲಿಕೆ 5ನೇ ವಾರ್ಡ್ ನ ಸದಸ್ಯ ನಿತೀನ್ ಇಂಡಿ ಹಾಗೂ ರತ್ನಾಕರಶೆಟ್ಟಿ ಮಾಲೀಕತ್ವದ ಇಂಡಿಯನ್ ಸೋಲ್ಜರ್ ತಂಡ ಕಮಲಾಪೂರ ಕೇಸರಿ ತಂಡದ ವಿರುದ್ಧ ಭರ್ಜರಿ ಜಯಗಳಿಸಿತು.
ಪ್ರಶಸ್ತಿ ವಿತರಣಾ ಸಂದರ್ಭದಲ್ಲಿ ತಂಡದ ಮಾಲೀಕರಾದ ನಿತೀನ್ ಇಂಡಿ ಮಾತನಾಡಿ, ತಮ್ಮ ತಂಡದ ಈ ವಿಜಯವನ್ನು ಭಾರತದ ರಕ್ಷಣೆಗೋಸ್ಕರ ಹಗಲಿರುಳು ಹೋರಾಡುವ ಹೆಮ್ಮೆಯ ಸೈನಿಕರಿಗೆ ಅರ್ಪಿಸುವುದಾಗಿ ಹೇಳಿದರು.
ಬರುವ ದಿನಗಳಲ್ಲಿ ಧಾರವಾಡ ಜಿಲ್ಲೆಯ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ಮುಂದುವರೆಸುವುದಾಗಿ ತಿಳಿಸಿದರು. ಧಾರವಾಡ ಪ್ರೀಮಿಯರ್ ಲೀಗ್ ನಲ್ಲಿ ಉತ್ತಮ ಪ್ರದರ್ಶನ ತೋರಿ, ತಂಡ ಗೆಲ್ಲಿಸಿಕೊಟ್ಟ ಶಿವು ಮಾದರಗೆ 40 ಗ್ರಾಂ ತೂಕದ ಬಂಗಾರದ ಬ್ಯಾಟನ್ನು ಉಡುಗೊರೆಯಾಗಿ ನೀಡಿ ಶುಭ ಹಾರೈಸಿದರು. ಈ ವೇಳೆ ತಂಡದ ಆಟಗಾರರು ಹಾಗೂ ಎಲ್ಲ ತಂಡದ ಮಾಲೀಕರು ಹಾಜರಿದ್ದರು.