ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಸಂಬಂಧಿಸಿದಂತೆ ವೈದ್ಯರು ಸೆಪ್ಟೆಂಬರ್ 15ರಿಂದ 21ರ ತನಕ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಶನಿವಾರ ನಡೆಸಿದ ಸಭೆಯಲ್ಲಿ ಈ ನಿರ್ಧಾರಕ್ಕೆ ಬಂದಿದೆ.
ಕರೋನಾ, ಚಿಕನ್ ಗುನ್ನಾ, ಹೆಚ್1ಎನ್1, ಮಲೇರಿಯಾ, ಡೆಂಗ್ಯೂ ಸೇರಿದಂತೆ ಅನೇಕ ವರದಿಗಳನ್ನ ನೀಡದಿರಲು ನಿರ್ಧರಿಸಲಾಗಿದೆ. ಹೀಗಾಗಿ ಒಂದು ವಾರಗಳ ಕಾಲ ಕರೋನಾ ರಿಪೋರ್ಟ್ ಸಿಗೋದು ಡೌಟ್. ಹೀಗೆ ಯಾವುದೆ ವರದಿಯನ್ನ ಸರ್ಕಾರಕ್ಕೆ ನೀಡದೆ ಪ್ರತಿಭಟನೆ ಮಾಡುವುದಕ್ಕೆ ಸರ್ಕಾರಿ ವೈದ್ಯರ ಸಂಘ ಮುಂದಾಗಿದೆ.
ಅಲ್ದೇ, ರಾಜ್ಯದ ಎಲ್ಲ ಹೊರ ರೋಗಿಗಳ ವಿಭಾಗ ಬಂದ್ ಮಾಡಿ ಬೆಂಗಳೂರು ಚೆಲೋ ಎನ್ನುತ್ತಿದ್ದು, ರಾಜ್ಯದ ವಿವಿಧ ಜಿಲ್ಲೆಗಳಿಂದ, ತಾಲೂಕುಗಳಿಂದ ಸರ್ಕಾರಿ ವೈದ್ಯರು ಇದರಲ್ಲಿ ಭಾಗವಹಿಸಲಿದ್ದಾರೆ. ಈ ಬಗ್ಗೆ ಸರ್ಕಾರ ಮಂಗಳವಾರದೊಳಗೆ ಸ್ಪಂದಿಸಿದ್ರೆ ಪ್ರತಿಭಟನೆಯಿಂದ ಹಿಂದೆ ಸರೆಯಬಹುದು. ಇಲ್ಲದೆ ಹೋದ್ರೆ ರಾಜ್ಯದಲ್ಲಿ ಮತ್ತೊಂದು ಸಂಕಷ್ಟ ಶುರುವಾಗಲಿದೆ.