ಚಂದನವನದ ಸಾಹಸಿಂಹ ಡಾ.ವಿಷ್ಣುವರ್ಧನ ಅವರ 10ನೇ ವರ್ಷದ ಪುಣ್ಯಸ್ಮರಣೆ ಇಂದು. ಕುಟುಂಬಸ್ಥರು, ಸಿನಿ ಕ್ಷೇತ್ರದ ದಿಗ್ಗಜರು ಸೇರಿದಂತೆ ಅವರ ಅಭಿಮಾನಿಗಳು ದಾದಾನನ್ನು ನೆನಪು ಮಾಡಿಕೊಂಡಿದ್ದಾರೆ.
ನಟ ಕಿಚ್ಚ ಸುದೀಪ ಟ್ವೀಟ್ ಮೂಲಕ ಅಪ್ಪಾಜಿಯನ್ನ ನೆನಪಿಸಿಕೊಂಡಿದ್ದಾರೆ. ಅಪ್ಪಾಜಿ, ಇಂದು ನಿಮ್ಮ 10ನೇ ಪುಣ್ಯಸ್ಮರಣೆ. ಆದ್ರೆ, ಮರೆತವರಿಗೆ ಮಾತ್ರ ಸ್ಮರಣೆ. ನೀವು ನಮ್ಮೆದೆಯ ನಂದಾದೀಪ ಅಂತಾ ಹೇಳುವ ಮೂಲಕ ತಮ್ಮ ನೆಚ್ಚಿನ ಎವರ್ ಗ್ರೀನ್ ಮೇರುನಟರನ್ನ ಭಾವನಾತ್ಮಕವಾಗಿ ಸ್ಮರಿಸಿದ್ದಾರೆ.