ಪುಂಡಿಪಲ್ಯ ಗಿಡದಲ್ಲಿ ದುರ್ಗಾದೇವಿಯಂತೆ.. ನಡೀತಿದೆ ಪೂಜೆ ಪುನಸ್ಕಾರ

292

ಪ್ರಜಾಸ್ತ್ರ ಸುದ್ದಿ

ಬಾಗಲಕೋಟೆ: ಜನ ಮರುಳೋ ಜಾತ್ರೆ ಮರುಳೋ ಅನ್ನೋ ಮಾತಿದೆ. ಹೀಗಾಗಿ ಜನರಿಗೆ ದೇವರ ಬಗ್ಗೆ ಏನೇ ಹೇಳಿದ್ರೂ ತಕ್ಷಣ ನಂಬಿ ಬಿಡ್ತಾರೆ. ಹೀಗಾಗಿ ದೇಶದಲ್ಲಿ ಹೆಜ್ಜೆ ಹೆಜ್ಜೆಗೊಂದು ಗುಡಿ ಗುಂಡಾರಗಳು ಸಿಗ್ತವೆ. ಕಾರಣ ಈ ರೀತಿಯ ಘಟನೆಗಳು ಜೀವಂತವಾಗಿರುವುದು. ಪುಂಡಿ ಗಿಡದಲ್ಲಿ ದುರ್ಗಾದೇವಿ ನೆಲೆಸಿದ್ದಾಳೆ ಎಂದು ಹೇಳಿ ಪೂಜಾ ಪುನಸ್ಕಾರ ನಡೆದಿವೆ.

ಬಾದಾಮಿ ತಾಲೂಕಿನ ಢಾಣಕಶಿರೂರು ಗ್ರಾಮದಲ್ಲಿರುವ ಜಮೀನುವೊಂದರಲ್ಲಿನ ಪುಂಡಿಪಲ್ಲೆ ಗಿಡದಲ್ಲಿ ದುರ್ಗಾದೇವಿ ನೆಲೆಸಿದ್ದಾಳೆ ಅನ್ನೋ ವದಂತಿ ಹಬ್ಬಿದೆ. ಈ ಬಗ್ಗೆ ಜೋಗುತಿ ಮೈಮೇಲೆ ದೇವರು ಬಂದು ಹೇಳಿದ್ದಾಳೆ ಎಂದು ಹೇಳ್ತಿರುವ ಜನರು, ಪೂಜೆ ಸಲ್ಲಿಸ್ತಿದ್ದಾರೆ. ಸುತ್ತಮುತ್ತಲಿನ ಗ್ರಾಮಸ್ಥರು ಸಹ ಇಲ್ಲಿಗೆ ಬಂದು ಪೂಜೆ ಮಾಡ್ತಿದ್ದಾರೆ. ಇದೇನು ನಂಬಿಕೆಯೋ ಮೂಢನಂಬಿಕೆಯೋ ಜನರೆ ತೀರ್ಮಾನ ಮಾಡಬೇಕು.




Leave a Reply

Your email address will not be published. Required fields are marked *

error: Content is protected !!