ಪ್ರಜಾಸ್ತ್ರ ಸುದ್ದಿ
ಶಿವಮೊಗ್ಗ: ಕಳೆದ ರಾತ್ರಿ ಹುಣಸೋಡು ಬಳಿ ಭಾರೀ ಶಬ್ಧ ಕೇಳಿ ಬಂದಿದೆ. ಜನರು ಭೂಕಂಪನ ಎಂದುಕೊಂಡಿದ್ರು. ಆದ್ರೆ, ಅಲ್ಲಿ ನಡೆದಿದ್ದು ಡೈನಾಮೈಟ್ ಸ್ಫೋಟ.. ಇದರ ಪರಿಣಾಮ 4 ಜನರು ಸಾವನ್ನಪ್ಪಿದ್ರು ಎನ್ನಲಾಗಿತ್ತು. ಇದೀಗ ಅದು 8ಕ್ಕೆ ಏರಿಕೆಯಾಗಿದೆ.
ಅಲ್ಲಿ ನಡೆಸ್ತಿದ್ದ ಗಣಿಗಾರಿಕೆ ಅಕ್ರಮ ಎಂದು ತಿಳಿದು ಬಂದಿದೆ. 2016ರಲ್ಲೇ ಪರವಾನಿಗೆ ಮುಗಿದು ಹೋಗಿದ್ರೂ ಅಕ್ರಮವಾಗಿ ಗಣಿಗಾರಿಕೆ ಮಾಡಿಕೊಂಡು ಬರಲಾಗಿದೆ. ಈ ಸಂಬಂಧ ಇದೀಗ ಇಬ್ಬರನ್ನ ವಶಕ್ಕೆ ಪಡೆಯಲಾಗಿದೆ. ಕಲ್ಲು ಗಣಿಗಾರಿಕೆ ಗುತ್ತಿಗೆದಾರ ಸುಧಾಕರ, ಜಿಲೆಟಿನ್ ಪೂರೈಕೆ ಮಾಡ್ತಿದ್ದ ಜೆಡಿಎಸ್ ಮುಖಂಡ ನರಸಿಂಹ ಎಂಬುವರನ್ನ ಬಂಧಿಸಲಾಗಿದೆ. ಜಮೀನು ಮಾಲೀಕ ಅವಿನಾಶ ತಲೆ ಮರೆಸಿಕೊಂಡಿದ್ದಾನೆ.
ಕಳೆದ ರಾತ್ರಿ 10.30ರ ಸಮಯದಲ್ಲಿ ಸುಮಾರು 50 ಡೈನಾಮೈಟ್ ಬಾಕ್ಸ್ ಗಳು ಸ್ಫೋಟಗೊಂಡು ಸುಮಾರು 8 ಜನ ಬಿಹಾರ ಮೂಲದ ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಸುಮಾರು 20 ಎಕರೆ ಪ್ರದೇಶದಲ್ಲಿ ಅಕ್ರಮ ಕಲ್ಲು ಗಣಿಕಾರಿಕೆ ನಡೆಯುತ್ತಿರುವುದು ತಿಳಿದು ಬಂದಿದೆ.