ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ವಿದೇಶ ಪ್ರವಾಸದಿಂದ ಬಂದ ಕ್ಷಣದಿಂದಲೇ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಸರ್ಕಾರದ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದಾರೆ. ನಾನು ಹಿಟ್ ಅಂಡ್ ರನ್ ವ್ಯಕ್ತಿ ಅಲ್ಲ. ರಾಜ್ಯದಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿವೆ ಅಂತಾ ಆರೋಪಿಸಿದರು.
ನಗರದ ಜೆ.ಪಿ ಭವನದ ಪಕ್ಷದ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಹಿಂದೆ ಪೇ ಸಿಎಂ ಪೋಸ್ಟರ್ ಅಭಿಯಾನ ಮಾಡಿದ್ದರು. ಎಲ್ಲದಕ್ಕೂ ದಾಖಲೆ ಕೇಳುತ್ತಿದ್ದರು. ಈಗ ಅವರ ಬಳಿ ದಾಖಲೆ ಇದೆಯಾ ಎಂದರು. ನೈಸ್ ರಸ್ತೆ ವಿಚಾರದಲ್ಲಿ ರಿಪೋರ್ಟ್ ಕೊಟ್ಟಿದ್ದು ನೀವೆ. ಪತ್ರಿಕೆಗಳಲ್ಲಿ ಜಾಹೀರಾತು ನೋಡಿದ್ದೇನೆ. ದೆಹಲಿ ಉಸ್ತುವಾರಿ ಕಾರ್ಯದರ್ಶಿ ಜಯಚಂದ್ರಗೆ ಬೆದರಿಕೆ ಹಾಕಿದವರು ಯಾರು ಅಂತಾ ಪ್ರಶ್ನಿಸಿದರು.
ಮೊದಲು ಉಚಿತ ವಿದ್ಯುತ್ ಅಂದವರು ನಿಯಮಗಳನ್ನು ಮಾಡಿದರು. 50, 60 ಯುನಿಟ್ ವಿದ್ಯುತ್ ಬಳಸುವವರಿಗೂ 10 ಯುನಿಟ್ ಹೆಚ್ಚಿಗೆ ಕೊಟ್ಟು 250 ರೂಪಾಯಿ ತನಕ ಬಿಲ್ ಕಳಿಸುತ್ತಿದ್ದಾರೆ. ಈಗ ನೋಡಿದರೆ ಕಲಬುರಗಿಗೆ ಹೋಗಿ ಉಚಿತ ಬಿಲ್ ಕೊಡುತ್ತಿದ್ದಾರೆ ಅಂತಾ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.