ಬೆಂಗಳೂರು: ನಾನು ಹುಟ್ಟಾ ಕಾಂಗ್ರೆಸಿಗ ಅಂತಾ ಮಾಜಿ ಸಚಿವ ಡಿಕೆ ಶಿವಕುಮಾರ ಹೇಳುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟಿದ್ದಾರೆ. ಡಿಕೆಶಿಗೆ ಸ್ವಾಗತ ಕೋರುವ ವೇಳೆ ಜೆಡಿಎಸ್ ಧ್ವಜ ಹಿಡಿದಿದ್ದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಮಾತ್ನಾಡಿದ್ರು. ಅದಕ್ಕೆ ಡಿಕೆಶಿ ತಿರುಗೇಟು ನೀಡಿದ್ದಾರೆ.
ಬೆಂಗಳೂರು ಏರ್ ಪೋರ್ಟ್ ನಿಂದ ನಾನು ಬರುವಾಗ ಪಕ್ಷಾತೀತವಾಗಿ ನನ್ನನ್ನು ಸ್ವಾಗತ ಮಾಡಿದ್ದಾರೆ. ಈ ವೇಳೆ ಕಾರ್ಯಕರ್ತರೊಬ್ಬರು ಜೆಡಿಎಸ್ ಧ್ವಜ ನೀಡಿದ್ರು. ಅದನ್ನ ಹಿಡಿದುಕೊಂಡಿದ್ದೆ. ಎಲ್ಲ ಪಕ್ಷದ ಕಾರ್ಯಕರ್ತರು ಬಂದಿದ್ರು. ನಾನು ಯಾರನ್ನೂ ಬರಬೇಡಿ ಎಂದು ಹೇಳಲು ಸಾಧ್ಯವಿಲ್ಲ.
ಜೆಡಿಎಸ್ ನಾಯಕರು ಸಹ ಮನೆಗೆ ಬಂದು ಭೇಟಿಯಾಗಿದ್ದಾರೆ. ಇಂತವರನ್ನ ಬರಬೇಡಿ ಎಂದು ಹೇಳಲು ಸಾಧ್ಯವೆ? ಕಾಂಗ್ರೆಸ್ ಕಚೇರಿ ನನಗೆ ದೇವಾಲಯವಿದ್ದಂತೆ. ಬೆಂಗಳೂರಿಗೆ ಬಂದ ತಕ್ಷಣ ನಾನು ಕಾಂಗ್ರೆಸ್ ಕಚೇರಿಗೆ ಹೋಗಿದ್ದೇನೆ. ನಾನು ಹುಟ್ಟಾ ಕಾಂಗ್ರೆಸಿಗ ಅಂತಾ ಹೇಳಿದ್ದಾರೆ.