ಬೆಳಗಾವಿ: ಉಪಚುನಾವಣೆಗೂ ಮೊದ್ಲೇ ಮಾಜಿ ಶಾಸಕ ರಾಜು ಕಾಗೆ ಬಿಜೆಪಿಗೆ ಟಾಟಾ ಹೇಳುವ ನಿಲುವು ಸ್ಪಷ್ಟ ಪಡಿಸಿದ್ದಾರೆ. ಬೈ ಎಲೆಕ್ಷನ್ ನಲ್ಲಿ ಬಿಜೆಪಿಯಿಂದ ಟಿಕೆಟ್ ಸಿಗದೆ ಹೋದ್ರೆ ಕಾಂಗ್ರೆಸ್ ನಿಂದ ಸ್ಪರ್ಧಿಸುವದು ಖಚಿತವೆಂದು ಹೇಳಿದ್ದಾರೆ.
ಬಿಎಸ್ವೈ ಸಿಎಂ ಸ್ಥಾನ ಕಳೆದುಕೊಂಡ್ರೆ ಕಳೆದುಕೊಳ್ಳಲಿ. ಅವರಿಗೆ ಅಧಿಕಾರ ಬೇಕು. ನಮಗೆ ಬೇಡವೇ ಎಂದು ಸಿಎಂ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದಲ್ಲಿ ಅನರ್ಹ ಶಾಸಕರಿಂದ ಬಿಜೆಪಿ ಅಧಿಕಾರಕ್ಕೆ ಬಂದಿದೆ ಅನ್ನೋದು ಹೈಕಮಾಂಡ್ ಭ್ರಮೆ. ಕಳೆದವಾರ ಹುಬ್ಬಳ್ಳಿಯಲ್ಲಿ ಮಾತ್ನಾಡಿರುವ ಸಿಎಂ, ಕಾಗವಾಡ ಕ್ಷೇತ್ರದಿಂದ ನನ್ಗೆ ಸ್ಪರ್ಧಿಸಲು ಅವಕಾಶ ಕೊಡುವುದಿಲ್ಲವೆಂದು ಹೇಳಿದ್ದಾರೆ. ಆದ್ರೆ, ನಾನು ಚುನಾವಣೆಗೆ ಸ್ಪರ್ಧಿಸಿಯೇ ತಿರುತ್ತೇನೆ ಅಂತಾ ಹೇಳಿದ್ದಾರೆ.
ಬಿಜೆಪಿಗೆ 106 ಸ್ಥಾನಗಳಿವೆ. ಸರ್ಕಾರ ರಚನೆಗೆ 8 ಶಾಸಕರ ಕೊರತೆಯಿದೆ. 8ರಲ್ಲಿ ಬಿಜೆಪಿ ಗೆದ್ದರೆ ಬಹುಮತ ಬರುತ್ತೆ. ಆಯ್ಕೆಯಾದ ಶಾಸಕರು ಬಂಡೆದ್ರೆ ಮತ್ತೆ ಬಿಜೆಪಿ ಸರ್ಕಾರ ಪತನವಾಗುತ್ತೆ ಅನ್ನೋ ಎಚ್ಚರಿಕೆ ನೀಡುವ ಮೂಲಕ ಸಿಎಂ ಬಿ.ಎಸ್ ಯಡಿಯೂರಪ್ಪಗೆ ಸವಾಲು ಹಾಕಿದ್ದಾರೆ.