ಎಸಿ ಸ್ಫೋಟ: ಹೆತ್ತವರೊಂದಿಗೆ ಮಕ್ಕಳಿಬ್ಬರ ಸಾವು

439

ಪ್ರಜಾಸ್ತ್ರ ಸುದ್ದಿ

ಹೊಸಪೇಟೆ: ಎಸಿ ಸ್ಫೋಟಗೊಂಡ ನಾಲ್ವರು ಸಾವನ್ನಪ್ಪಿರುವ ದಾರುಣ ಘಟನೆ ತಾಲೂಕಿನ ಮರಿಯಮ್ಮನಹಳ್ಳಿಯಲ್ಲಿ ನಡೆದಿದೆ. ವೆಂಕಟೇಶ್ ಪ್ರಶಾಂತ್(42), ಪತ್ನಿ ಚಂದ್ರಕಲಾ(38), ಮಕ್ಕಳಾದ  ಅರ್ದ್ವಿಕ್(16) ಹಾಗೂ ಪ್ರೇರಣಾ(8) ಮೃತ ದುರ್ದೈವಿಗಳು.

ಇಂದು ಬೆಳಗಿನ ಜಾವ ಈ ದುರಂತ ಸಂಭವಿಸಿದೆ. ರಾಘವೇಂದ್ರ ಶೆಟ್ಟಿ ಎಂಬುವರ ಮನೆಯಲ್ಲಿ ಅನಾಹುತ ಸಂಭವಿಸಿದೆ. ರಾಘವೇಂದ್ರ ಹಾಗೂ ಪತ್ನಿ ರಾಜಶ್ರೀ ಮನೆಯಿಂದ ಹೊರಗಡೆ ಓಡಿ ಬಂದಿದ್ದಾರೆ. ಆದರೆ, ವೆಂಕಟೇಶ್ ಕುಟುಂಬ ಹೊರ ಬರಲಾಗದೆ ಮೃತಪಟ್ಟಿದ್ದಾರೆ.

ಶಾರ್ಟ್ ಸರ್ಕ್ಯೂಟ್ ನಿಂದ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಹೊಗೆಯಿಂದೋ ಅಥವ ಅನಿಲ ಸೋರಿಕೆಯಿಂದ ಉಸಿರುಗಟ್ಟಿ ಸಾವನ್ನಪ್ಪಿದ್ದಾರೋ ಅನ್ನೋದರ ಕುರಿತು ತನಿಖೆ ನಡೆಸಲಾಗುತ್ತಿದೆ.




Leave a Reply

Your email address will not be published. Required fields are marked *

error: Content is protected !!