ಪ್ರಜಾಸ್ತ್ರ ಸುದ್ದಿ
ನವದೆಹಲಿ: ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ವಂದನಾ ನಿರ್ಣಯ ಭಾಷಣಕ್ಕೆ ಉತ್ತರಿಸಿ ಪ್ರಧಾನಿ ಮೋದಿ ರಾಜ್ಯಸಭೆಯಲ್ಲಿ ಮಾತ್ನಾಡಿದ್ರು. ಈ ವೇಳೆ ಕೃಷಿ ಮಸೂದೆ ವಿರೋಧಿಸಿ ರೈತರು ಮಾಡ್ತಿರುವ ಪ್ರತಿಭಟನೆಯನ್ನ ಕೈ ಬಿಡಿಯೆಂದು ಮನವಿ ಮಾಡಿಕೊಂಡರು.
ಮಾತುಕತೆ ಮೂಲಕ ಸಮಸ್ಯೆಯನ್ನ ಬಗೆಹರಿಸಿಕೊಳ್ಳೋಣ. ಹೀಗಾಗಿ ಕೃಷಿ ಮಸೂದೆ ಜಾರಿಗೆ ಅವಕಾಶ ಕೊಡಿ ಎಂದರು. ಅಲ್ದೇ, ಎಂಎಸ್ ಪಿಯನ್ನ ಸಹ ಮುಂದುವರೆಸಲಾಗುತ್ತೆ. ಬೆಂಬಲ ಬೆಲೆ ಈಗಾಗ್ಲೇ ಇದೆ. ಅದು ಇರುತ್ತೆ ಹಾಗೂ ಮುಂದುವರೆಯುತ್ತೆ. ಆದ್ರೆ, ರೈತರು ಯಾವುದೇ ತಪ್ಪು ಮಾಹಿತಿಗಳಿಗೆ ಕಿವಿ ಕೊಡಬಾರದು ಎಂದು ಮನವಿ ಮಾಡಿಕೊಂಡರು.