ಪ್ರಜಾಸ್ತ್ರ ಸುದ್ದಿ
ಚಮೋಲಿ: ಉತ್ತರಾಖಂಡದ ಚಮೋಲಿ ಜಿಲ್ಲೆಯ ಜೋಶಿಮಠದ ತಪೋವನದ ಭಾರೀ ಹಿಮಪಾತ ದುರಂತ ಸಂಭವಿಸಿದೆ. ಈ ಬಗ್ಗೆ ಮುಖ್ಯಮಂತ್ರಿ ತಿವೇಂದ್ರ ಸಿಂಗ್ ರಾವತ್ ಸೋಮವಾರ ಮಾಹಿತಿ ನೀಡಿದ್ದಾರೆ.
ತಪೋವನ್ ನಲ್ಲಿರುವ ಕಂಪನಿಯೊಂದರಲ್ಲಿ 24-25 ಜನರು ಕೆಲಸ ಮಾಡ್ತಿದ್ದರಂತೆ. ದರಂತ ನಡೆದ ಬಳಿಕ 203 ಜನರು ಕಾಣೆಯಾಗಿದ್ದು 11 ಶವಗಳು ಪತ್ತೆಯಾಗಿವೆ. 35 ಜನರು ಸುರಂಗದಲ್ಲಿ ಸಿಲುಕಿರುವ ಶಂಕೆ ಇದೆ ಎಂದು ಸಿಎಂ ರಾವತ್ ತಿಳಿಸಿದ್ದಾರೆ.
ಇನ್ನು ಈ ಘಟನೆಯ ಕಾರ್ಯಾಚರಣೆಯ ಉಸ್ತುವಾರಿಯನ್ನ ಜಿಲ್ಲಾಡಳಿತ ವಹಿಸಿಕೊಂಡಿದೆ. ಪೊಲೀಸರು, ಆರ್ಮಿ ಐಟಿಬಿಪಿ, ಎನ್ ಡಿಆರ್ ಎಫ್ ತಂಡ ಸ್ಥಳದಲ್ಲಿ ಕಾರ್ಯಾಚರಣೆ ನಡೆಸಿವೆ.