ಪ್ರಜಾಸ್ತ್ರ ಸುದ್ದಿ
ಹುಬ್ಬಳ್ಳಿ: ಕೇಶ್ವಾಪುರದ ಹಳೆ ಬದಾಮಿ ನಗರದ 1ನೇ ಕ್ರಾಸ್ ಬಳಿ ಸೋಮವಾರ ಮಧ್ಯಾಹ್ನ ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿತ್ತು. ಯಾಕಂದ್ರೆ, ಗ್ಯಾಸ್ ಪೈಪ್ ಲೈನ್ ಒಡೆದು ಹೋದ ಪರಿಣಾಮ, ಗ್ಯಾಸ್ ಸೋರಿಕೆಯಾಗಿದೆ. ಇದ್ರಿಂದಾಗಿ ಸುತ್ತಮುತ್ತಲಿನ ಜನರು ಆತಂಕಕ್ಕೆ ಒಳಗಾಗಿದ್ರು.
ಸ್ಥಳೀಯರೊಬ್ಬರು ಗ್ಯಾಸ್ ಸೋರಿಕೆ ಬಗ್ಗೆ ಅದಾನಿ ಗ್ಯಾಸ್ ಏಜೆನ್ಸಿಯವರಿಗೆ ತಿಳಿಸಿದ್ದಾರೆ. ಅವರು ಬಂದು ಗ್ಯಾಸ್ ಸೋರಿಕೆಯನ್ನ ನಿಲ್ಲಿಸಿದ್ದಾರೆ. ಭಾನುವಾರ ಸಂಜೆ ಸಹ ಇದೆ ಜಾಗದಲ್ಲಿ ಸೋರಿಕೆಯಾಗಿದೆ. ಬದಾಮಿ ನಗರದಲ್ಲಿ ಒಳಚರಂಡಿ ಕಾಮಗಾರಿ ನಡೆಯುತ್ತಿರುವುದ್ರಿಂದ ಈ ಐದಾರು ಕಡೆ ಸಮಸ್ಯೆಯಾಗಿದೆ ಎಂದು ಅದಾನಿ ಗ್ಯಾಸ್ ಏಜೆನ್ಸಿ ಮೇಲ್ವಿಚಾರಕ ಸಾಗರ ಜಿ.ಬಿ ತಿಳಿಸಿದ್ದಾರೆ.