ಅಮರಾವತಿ: ಆಂಧ್ರದ ಮಾಜಿ ಸಿಎಂ ಚಂದ್ರಬಾಬು ನಾಯ್ಡುಗೆ ಭಾರೀ ಮುಖಭಂಗವಾಗಿದೆ. ಮಾಜಿ ಸಿಎಂ ಬಂದಿದ್ದ ಕಾರ್ ಮೇಲೆ ರೈತರು ಚಪ್ಪಲಿಗಳನ್ನ ಎಸೆದು ಗೋ ಬ್ಯಾಕ್ ಘೋಷಣೆಗಳನ್ನ ಕೂಗಿದ್ದಾರೆ.
ಉಂಡವಳ್ಳಿಯಿಂದ ಅಮರಾವತಿವರೆಗೂ ಪ್ರವಾಸ ಹೊರಟಿದ್ದ ಮಾಜಿ ಸಿಎಂ ಚಂದ್ರಬಾಬು ನಾಯ್ಡು, ದಾರಿಯ ನಡುವೆ ರೈತರೊಂದಿಗೆ ಸಮಾಲೋಚನೆಗೆ ಮುಂದಾದ್ರು. ಅಮರಾವತಿಗಾಗಿ ತಮ್ಮ ಜಮೀನು ನೀಡಿರುವ ರೈತರೊಂದಿಗೆ ಮಾತ್ನಾಡಲು ಹೊರಟಾಗ ಚಪ್ಪಲಿಯನ್ನ ಎಸೆಯಲಾಗಿದೆ.
ವೆಂಕಟಾಯಪಾಳೆಂ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಕಾರನ್ನ ಅಡ್ಡಗಟ್ಟುವ ಪ್ರಯತ್ನ ಮಾಡಲಾಯ್ತು. ಅದು ನಿಲ್ಲದೇ ಹೋದಾಗ ಚಪ್ಪಲಿಗಳನ್ನ ಎಸೆದ್ರು. ರೈತರ ಈ ಪರಿ ಆಕ್ರೋಶಕ್ಕೆ ಕಾರಣವಾಗಿದ್ದು, ಅಮರಾವತಿ ಅಭಿವೃದ್ಧಿಗೆ ಜಮೀನು ನೀಡಿದವರಿಗೆ ಅತ್ಯಂತ ಕಡಿಮೆ ಪರಿಹಾರ ನೀಡಲಾಗಿದೆ ಅನ್ನೋದು. ಪಟ್ಟ ನಗರದ ಜನರಿಗೆ ನೀಡಿದ ಪರಿಹಾರಕ್ಕೆ ಹೋಲಿಸಿದ್ರೆ ನಮ್ಮ ಪರಿಹಾರ ತುಂಬಾ ಕಡಿಮೆಯೆಂದು ಆಕ್ರೋಶ ಹೊರ ಹಾಕಿದ್ರು.