ಕಾಂಗ್ರೆಸ್, ಜೆಡಿಎಸ್ ವಿರುದ್ಧ ಸಿಎಂ ವಾಗ್ದಾಳಿ

371

ಯಲ್ಲಾಪುರ: ಕಾಂಗ್ರೆಸ್ ಹಾಗೂ ಜೆಡಿಎಸ್ ನವರಿಗೆ ಅಭಿವೃದ್ಧಿ ಬೇಕಾಗಿಲ್ಲ. ಅವರಿಗೆ ಚುನಾವಣೆ ಬೇಕಂತೆ. ಅವರು ಅಂದುಕೊಂಡಂತೆ ಮೂರು ಮೂರು ತಿಂಗಳಿಗೆ ಚುನಾವಣೆ ಆಗುವುದಿಲ್ಲ ಅಂತಾ ಸಿಎಂ ಬಿಎಸ್ವೈ ವಾಗ್ದಾಳಿ ನಡೆಸಿದ್ರು.

ಯಲ್ಲಾಪುರದಲ್ಲಿ ಬಿಜೆಪಿ ಅಭ್ಯರ್ಥಿ ಶಿವರಾಂ ಹೆಬ್ಬಾರ ಪರ ಮುಂಡಗೋಡಿನಲ್ಲಿ ಪ್ರಚಾರ ನಡೆಸಿದ ಸಿಎಂ, ನಿಮ್ಮ ಯೋಗ್ಯತೆಗೆ ಒಟ್ಟಾಗಿ ಮೈತ್ರಿ ಸರ್ಕಾರ ಮಾಡದಿರುವುದಕ್ಕೆ ಯಡಿಯೂರಪ್ಪ ಕಾರಣವಲ್ಲ. ನೀವೆ ಕಾರಣ ಎಂದು ಕಾಂಗ್ರೆಸ್, ಜೆಡಿಎಸ್ ವಿರುದ್ದ ಗುಡುಗಿದ್ರು.

ರಾಜ್ಯದಲ್ಲಿ ಅಧಿಕಾರ ನಡೆಸಿದ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿಯವರ ಕೊಡುಗೆ ಏನು? ಜನ‌ಹಿತ ಮರೆತು ಫೈವ್ ಸ್ಟಾರ್ ಹೋಟೆಲ್ ನಲ್ಲಿ ಆಡಳಿತ ನಡೆಸಿದ್ದೆ ದೊಡ್ಡ ಸಾಧನೆ. ಶಾಸಕರ, ಜನರ ನೋವಿಗೆ ಸ್ಪಂದಿಸಲಿಲ್ಲ ಅಂತಾ ತಿರುಗೇಟು ನೀಡಿದ್ರು.




Leave a Reply

Your email address will not be published. Required fields are marked *

error: Content is protected !!