ಪ್ರಜಾಸ್ತ್ರ ಅಪರಾಧ ಸುದ್ದಿ
ಮಂಡ್ಯ: ತನ್ನ ಪುಟ್ಟ ಮಕ್ಕಳಿಬ್ಬರನ್ನು ಕ್ರೂರಿ ತಂದೆಯೇ ಕೊಲೆ ಮಾಡಿರುವ ಹೃದಯವಿದ್ರಾವಕ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮರಳಾಗಾಲ ಗ್ರಾಮದ ತೋಟದ ಮನೆಯಲ್ಲಿ ಬುಧುವಾರ ರಾತ್ರಿ ನಡೆದಿದೆ.
ಏನೂ ಅರಿಯದ ಆದಿತ್ಯ(04) ಹಾಗೂ ಅಮೂಲ್ಯ(02) ವರ್ಷದ ಮಕ್ಕಳನ್ನು ಹತ್ಯೆ ಮಾಡಿದ್ದಾನೆ. ಪತ್ನಿ ಲಕ್ಷ್ಮಿಗೂ ಚೂರಿಯಿಂದ ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಶ್ರೀಕಾಂತ್ ಪರಾರಿಯಾಗಿದ್ದಾನೆ.
ಮರಳಾಗಾಲದ ವಿರೂಪಾಕ್ಷ ಎಂಬುವರ ತೋಟದ ಮನೆಯಲ್ಲಿ ಅಂಬಿಕಾ ಹಾಗೂ 2ನೇ ಪತಿ ಮೋಹನ್ ಕೆಲಸ ಮಾಡುತ್ತಿದ್ದರು. ಅಂಬಿಕಾಳ ಮೊದಲ ಪತಿಯ ಮಗಳು ಲಕ್ಷ್ಮಿಯನ್ನು ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಗಾಣಗಾಪುರದ ಶ್ರೀಕಾಂತ್ ಎಂಬುವನ ಜೊತೆಗೆ ಮದುವೆ ಮಾಡಿಕೊಡಲಾಗಿತ್ತು. ಇವರು ಮಂಗಳವಾರವಷ್ಟೇ ಇಲ್ಲಿಗೆ ಬಂದಿದ್ದರು. ಹೀಗಿರಬೇಕಾದರೆ ಬುಧವಾರ ರಾತ್ರಿ ಈ ಕೃತ್ಯ ಎಸಗಿದ್ದಾನೆ. ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.