ಆಕಸ್ಮಿಕ ಬೆಂಕಿ ಅನಾಹುತಕ್ಕೆ ಸುಟ್ಟು ಭಸ್ಮವಾದ ಮನೆ

330

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಆಕಸ್ಮಿಕ ಬೆಂಕಿ ಅನಾಹುತಕ್ಕೆ ಮನೆಯೊಂದು ಸುಟ್ಟು ಕರಕಲಾದ ಘಟನೆ ಸಿಂದಗಿ ತಾಲೂಕಿನ ಬ್ರಹ್ಮ ದೇವನಮಡು ಗ್ರಾಮದಲ್ಲಿ ನಡೆದಿದೆ. ಸುಭಾಸ ಮಲ್ಲಪ್ಪ ಮನಗೂಳಿ ಎಂಬುವರಿಗೆ ಸೇರಿದ ಮನೆ ಸಂಪೂರ್ಣವಾಗಿ ಸುಟ್ಟು ಹೋಗಿದೆ.

ಮನೆಯವರು ಕೂಲಿ ಕೆಲಸಕ್ಕೆ ಹೋದ ಸಂದರ್ಭದಲ್ಲಿ ಒಲಿಯಲ್ಲಿನ ಬೆಂಕಿ ಗಾಳಿಗೆ ಹತ್ತಿಕೊಂಡು ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅದರಂತೆ ಅಕ್ಕಿ, ಗೋಧಿ, ಶೇಂಗಾ, ಸಜ್ಜಿ, ಬೆಳೆ ಕಾಳು, 1 ಲಕ್ಷದ 50 ಸಾವಿರ ರೂಪಾಯಿ, ಒಂದು ಬೈಕ್ ಸೇರಿದಂತೆ ಸುಮಾರು 2 ಲಕ್ಷದ 73 ಸಾವಿರ ರೂಪಾಯಿ ವರೆಗೂ ಹಾನಿಯಾಗಿದೆ ಎಂದು ತಿಳಿದು ಬಂದಿದೆ.

ಬೆಂಕಿ ಅನಾಹುತದ ಬಗ್ಗೆ ಮಾಹಿತಿ ಬಂದ ನಂತರ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಸ್ಥಳೀಯರ ಸಹಾಯದೊಂದಿಗೆ ಬೆಂಕಿ ನಂದಿಸಿದ್ದಾರೆ. ಮನೆ ಕಳೆದುಕೊಂಡ ಸುಭಾಸ ಸಿಂದಗಿ ತಹಶೀಲ್ದಾರ್ ಹಾಗೂ ಸಿಂದಗಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!