ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸೋಮವಾರ ಬೆಂಕಿ ಅವಗಡ ನಡೆದಿದೆ. ಇದರಿಂದಾಗಿ 10ಕ್ಕೂ ಹೆಚ್ಚು ಬಸ್ ಗಳು ಸುಟ್ಟು ಕರಕಲಾಗಿವೆ. ವೀರಭದ್ರನಗರದಲ್ಲಿನ ಗೋದಾಮಿನಲ್ಲಿ ಹತ್ತಿದ ಬೆಂಕಿಯಿಂದಾಗಿ 10ಕ್ಕೂ ಹೆಚ್ಚು ಖಾಸಗಿ ಬಸ್ ಗಳು ಸುಟ್ಟಿವೆ.
ಎಸ್.ವಿ ಕೋಚ್ ಅನ್ನೋ ಹೆಸರಿನಲ್ಲಿ ಶ್ರೀನಿವಾಸ್ ಎಂಬುವರ ಗ್ಯಾರೇಜ್ ಇದೆ. ಬಸ್ ಗಳ ಚಾರ್ಸಿಗೆ ಬಾಡಿ ಪಿಟ್ ಮಾಡುವ ಕೆಲಸವನ್ನು ಮಾಡಲಾಗುತ್ತಿದೆ. ಇದಕ್ಕಾಗಿ ವೆಲ್ಟಿಂಗ್ ಹಾಗೂ ಕಟ್ಟಿಂಗ್ ಮಷಿನ್ ಬಳಸಲಾಗುತ್ತಿದೆ. ಸ್ಪಾರ್ಕ್ ನಿಂದ ಏನಾದರೂ ಬೆಂಕಿ ಅನಾಹುತ ನಡೆದರಬಹುದಾ ಎಂದು ಶಂಕಿಸಲಾಗಿದೆ. ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ.