ಬೆಂಗಳೂರು: ವಲಸೆ ಕಾರ್ಮಿಕರಿಗೆ ಉಚಿತ ಬಸ್ ಸೇವೆ ನೀಡಲಾಗ್ತಿದೆ. ಅದು ಕೇವಲ ಮೂರು ದಿನವೆಂದು ಹೇಳಲಾಗಿತ್ತು. ಆದ್ರೆ, ಇದೀಗ ಇನ್ನು ಎರಡು ದಿನ ವಿಸ್ತರಣೆ ಮಾಡುವ ಮೂಲಕ, ರಾಜ್ಯ ಸರ್ಕಾರ ಒಳ್ಳೆಯ ನಿರ್ಧಾರ ತೆಗೆದುಕೊಂಡಿದೆ.
ಬುಧುವಾರದವರೆಗೆ ಮಾತ್ರ ಬಸ್ ಸೇವೆ ಎಂದು ಹೇಳಲಾಗಿತ್ತು. ಅದು ಎರಡು ದಿನ ವಸ್ತರಣೆಯೊಂದಿಗೆ ಮೇ 7ರ ವರೆಗೆ ಉಚಿತ ಬಸ್ ಸೇವೆ ಸಿಗಲಿದೆ. ಶನಿವಾರದಂದು 550 ಬಸ್ ಗಳಲ್ಲಿ 16,500 ಜನ, ಭಾನುವಾರ 951 ಬಸ್ ಗಳಲ್ಲಿ 30 ಸಾವಿರ ಜನ ತಂತಮ್ಮ ಊರುಗಳಿಗೆ ತೆರಳಿದ್ದಾರೆ.
ಇಂದು ಎರಡು ರೈಲುಗಳು ರಾಜಸ್ಥಾನದ ಜೈಪುರ ಹಾಗೂ ಬಿಹಾರದ ಪಾಟ್ನಾ ನಗರಕ್ಕೆ ಹೋಗುತ್ತಿವೆ. ಪ್ರಯಾಣಕ್ಕೂ ಮೊದ್ಲು ಎಲ್ಲರಿಗೂ ಊಟ ಹಾಗೂ ನೀರಿನ ವ್ಯವಸ್ಥೆ ಮಾಡಲಾಗ್ತಿದೆ ಎಂದು ಸಿಎಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.