ಪ್ರಜಾಸ್ತ್ರ ಸುದ್ದಿ
ಮೈಸೂರು: ಗೆಳೆಯನ ಹುಟ್ಟು ಹಬ್ಬಕ್ಕೆ ಬಂದ ಸ್ನೇಹಿತ ಸೇರಿ ಇಬ್ಬರು ಸಾವನ್ನಪ್ಪಿದ ಘಟನೆ ತಿ.ನರಸೀಪುರ ತಾಲೂಕಿನ ತಡಿಮಾಲಂಗಿ ಗ್ರಾಮದಲ್ಲಿ ನಡೆದಿದೆ. ಅಭಿಷೇಕ(21) ಹಾಗೂ ಅಂಕೇಶ(21) ಮೃತ ದುರ್ದೈವಿಗಳು.
ಯಳಂದೂರು ತಾಲೂಕಿನ ಕಿನಕಹಳ್ಳಿ ಗ್ರಾಮದವರಾದ ಸ್ನೇಹಿತರು, ಚಾಮರಾಜನಗರದ ಸರ್ಕಾರಿ ಇಂಜಿನಿಯರ್ ಕಾಲೇಜಿನಲ್ಲಿ ಓದುತ್ತಿದ್ದರು. ಹುಟ್ಟು ಹಬ್ಬ ಆಚರಿಸಲು ತಡಿಮಾಲಂಗಿಗೆ ಬಂದಿದ್ದಾಗ ಈಜಲು ನದಿಗೆ ಹೋಗಿದ್ದಾರೆ. ಈ ವೇಳೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.