ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ನಾಡಿನ ತುಂಬಾ ಇಂದು ಗಣೇಶ ಚತುರ್ಥಿಯ ಸಂಭ್ರಮ ಮನೆ ಮಾಡಿದೆ. ಕೋವಿಡ್ 19 ಭಯದ ನಡುವೆಯೂ ಮೊದಲ ಪೂಜಿತನ ಪೂಜೆಗೆ ಸಕಲ ರೀತಿಯಿಂದ ತಯಾರಿ ನಡೆದಿದೆ. ಆದ್ರೆ, ಈ ಬಾರಿ ಎದಿನಂತೆ ವಿಜೃಂಭಣೆಯ ಗಣೇಶೋತ್ಸವ ನಡೆಯುವುದಿಲ್ಲ.
ಕೋವಿಡ್ 19 ನಿಯಮಗಳನ್ನ ಪಾಲಿಸಬೇಕಿದೆ. ಮನೆಯಲ್ಲಿ 2 ಅಡಿ ಗಣೇಶ, ಸಾರ್ವಜನಿಕ ಸ್ಥಳಗಳಲ್ಲಿ 4 ಅಡಿ ಗಣೇಶ ಪ್ರತಿಷ್ಠಾಪನೆ ಮಾಡಿ ಪೂಜಿಸಲು ಸೂಚಿಸಲಾಗಿದೆ. ಅಲ್ದೇ, 20ಕ್ಕಿಂತ ಹೆಚ್ಚು ಜನರು ಸೇರಬಾರದು, ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ಸಂದರ್ಭದಲ್ಲಿ ಯಾವುದೇ ರೀತಿ ಮೆರವಣಿಗೆ ಮಾಡಬಾರದು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ಆಯೋಜಿಸಬಾರದು ಅನ್ನೋ ಷರತ್ತುಗಳನ್ನ ವಿಧಿಸಿ ಅವಕಾಶ ನೀಡಲಾಗಿದೆ.
ಈಗಿರುವ ಕೋವಿಡ್ 19 ವಿಘ್ನವನ್ನ ಆ ವಿಘ್ನೇಶ್ವರ ನಿವಾರಣೆ ಮಾಡಲಿ ಎಂದು ಪ್ರಾರ್ಥಿಸಿಕೊಳ್ಳುತ್ತಾ, ಸರ್ಕಾರ ಸೂಚಿಸಿರುವ ನಿಯಮಗಳನ್ನ ಪ್ರತಿಯೊಬ್ಬರು ಪಾಲಿಸಬೇಕಿದೆ. ಸಾರ್ವಜನಿಕವಾಗಿ ಸೇರುವ ಸ್ಥಳಗಳಲ್ಲಿ ಮಾಸ್ಕ್, ಸ್ಯಾನ್ ಟೈಸರ್ ಬಳಸಬೇಕಿದೆ.