ಪ್ರಜಾಸ್ತ್ರ ಸುದ್ದಿ
ಹೈದರಾಬಾದ್: ವಿಶಾಖಪಟ್ಟಣದಿಂದ ಸಿಕಂದರಬಾದ್ ಗೆ ಬರುತ್ತಿದ್ದ ಗೋಧಾವರಿ ಎಕ್ಸ್ ಪ್ರೆಸ್ ರೈಲು ಹಳಿ ತಪ್ಪಿದ ಘಟನೆ ಬುಧವಾರ ಮುಂಜಾನೆ ಘಟಕೇಸರ್ ಹತ್ತಿರದ ಎನ್ಎಫ್ ಸಿ ಬಳಿ ನಡೆದಿದೆ. ಇದರಿಂದಾಗಿ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಹಳಿ ತಪ್ಪಿದ ಸಂದರ್ಭದಲ್ಲಿ ರೈಲು 100 ಕಿಲೋ ಮೀಟರ್ ವೇಗದಲ್ಲಿತ್ತು. ಹೀಗಾಗಿ ಕೊನೆಯ 6 ಬೋಗಿಗಳು ಹಳಿ ತಪ್ಪಿವೆ. ತೈಲ ಸೋರಿಕೆಯಿಂದ ಈ ಅನಾಹುತ ನಡೆದಿದೆ ಎನ್ನಲಾಗುತ್ತಿದೆ. ಅದೃಷ್ಟವಶಾತ್ ಬೋಗಿಗಳು ಉರುಳಿ ಬಿದ್ದಿಲ್ಲ. ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಹಳಿ ತಪ್ಪಿದ ಬೋಗಿ ಬಿಟ್ಟು ಟ್ರೇನ್ ಸಿಕಂದರಬಾದ್ ಗೆ ತೆರಳಿದೆ. ಘಟನೆಯಿಂದಾಗಿ ಟ್ರೇನ್ ಗಳ ವೇಳಾಪಟ್ಟಿಯಲ್ಲಿ ಸಮಸ್ಯೆಯಾಗಿದೆ.