ದುಷ್ಕರ್ಮಿಗಳ ಹುಚ್ಚಾಟಕ್ಕೆ ಮೈಸೂರಿನಲ್ಲಿ ಯುವಕ ಬಲಿ

235

ಪ್ರಜಾಸ್ತ್ರ ಅಪರಾಧ ಸುದ್ದಿ

ಮೈಸೂರು: ನಗರದ ಚಿನ್ನಾಭರಣ ಅಂಗಡಿಯನ್ನ ದೋಚಲು ಬಂದ ದುಷ್ಕರ್ಮಿಗಳ ಗುಂಡೇಟಿಗೆ ದಾರಿಯಲ್ಲಿ ಹೋಗುತ್ತಿದ್ದ ಯುವಕ ಬಲಿಯಾಗಿದ್ದಾನೆ. ದಡದಹಳ್ಳಿ ಗ್ರಾಮದ ಚಂದ್ರು(23) ಮೃತ ಯುವಕ ಎಂದು ತಿಳಿದು ಬಂದಿದೆ.

ನಗರದ ವಿದ್ಯಾರಣ್ಯಪುರಂದಲ್ಲಿರುವ ಅಮೃತ್ ಗೋಲ್ಡ್ ಆ್ಯಂಡ್ ಸಿಲ್ವರ್ ಅಂಗಡಿಗೆ ಮೂವರು ಕಳ್ಳರು ನುಗ್ಗಿದ್ದಾರೆ. ಇವರನ್ನ ತಡೆಯಲು ಅಂಗಡಿ ಮಾಲೀಕ ಪ್ರಯತ್ನಿಸಿದ್ದಾನೆ. ಆಗ ಕಳ್ಳರು ಗನ್ ನಿಂದ ಶೂಟ್ ಮಾಡಿದ್ದಾರೆ. ಆ ಗುಂಡು ರಸ್ತೆಯಲ್ಲಿ ಬರ್ತಿದ್ದ ಯುವಕನಿಗೆ ಬಿದ್ದಿದೆ. ಇದ್ರಿಂದಾಗಿ ಆತ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.




Leave a Reply

Your email address will not be published. Required fields are marked *

error: Content is protected !!