ಗೃಹಲಕ್ಷ್ಮಿ ಯೋಜನೆ ಪರಿಶೀಲಿಸಿದ ಡಿಸಿಎಂ ಡಿಕೆಶಿ

179

ಪ್ರಜಾಸ್ತ್ರ ಸುದ್ದಿ

ಕನಕಪುರ: ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸ್ವಕ್ಷೇತ್ರ ಕನಕಪುರಕ್ಕೆ ಭೇಟಿ ಕೊಟ್ಟು ಗೃಹಲಕ್ಷ್ಮಿ ಯೋಜನೆಯ ಪ್ರಕ್ರಿಯೆ ಪರಿಶೀಲನೆ ನಡೆಸಿದರು. ಕರ್ನಾಟಕ ಒನ್ ಸಮಗ್ರ ನಾಗರಿಕ ಸೇವಾ ಕೇಂದ್ರಕ್ಕೆ ದಿಢೀರ್ ಭೇಟಿ ಕೊಟ್ಟು ಪ್ರಕ್ರಿಯೆ ನೋಡಿದರು.

ಎಸ್ಎಲ್ಎನ್ ರಸ್ತೆಯಲ್ಲಿರುವ ಕರ್ನಾಟಕ ಒನ್ ಸಮಗ್ರ ನಾಗರಿಕ ಕೇಂದ್ರಕ್ಕೆ ಭೇಟಿ ನೀಡಿದರು. ಡಿಸಿಎಂ ನೋಡಿದ ಅಲ್ಲಿನ ಸಿಬ್ಬಂದಿ ತಬ್ಬಿಬ್ಬಾದರು. ಫಲಾನುಭವಿಗಳು ಸಹ ಡಿಸಿಎಂ ನೋಡಿ ಶಾಕ್ ಆದರು. ಗೃಹಲಕ್ಷ್ಮಿ ಯೋಜನೆ ಸರಾಗವಾಗಿ ನಡೆಯುತ್ತಿದ್ಯಾ ಅಥವ ಏನಾದರೂ ಸಮಸ್ಯೆ ಇದ್ಯಾ, ಸಿಬ್ಬಂದಿ ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರ ಏನು ಅನ್ನೋದು ಜನರಿಗೆ ವಿಚಾರಿಸಿದರು.

ಅರ್ಜಿ ತುಂಬಿದ ನಂತರ ಕೆಲ ಫಲಾನುಭವಿಗಳಿಗೆ ತಾವೇ ಅದನ್ನು ವಿತರಣೆ ಮಾಡಿದರು. ಕೆಲವು ಕಡೆ ಸರ್ವಸ್ ಸಮಸ್ಯೆಯಿದೆ. ಕೆಲವು ಕಡೆ ಸೇವಾ ಕೇಂದ್ರಗಳ ಕೊರತೆಯಿದೆ. ಹೀಗಾಗಿ ಮಹಿಳೆಯರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದು, ಈ ಬಗ್ಗೆ ಸರ್ಕಾರ ಗಮನ ಹರಿಸಬೇಕಿದೆ.




Leave a Reply

Your email address will not be published. Required fields are marked *

error: Content is protected !!