ಪ್ರಜಾಸ್ತ್ರ ಸುದ್ದಿ
ಹಾಸನ: ಜಿಲ್ಲೆಯ ಪ್ರಸಿದ್ಧ ಹಾಸನಾಂಬೆ ದೇವಸ್ಥಾನದ ಬಾಗಿಲು ಇಂದಿನಿಂದ ತೆರೆದುಕೊಂಡಿದೆ. ಕೋವಿಡ್ ಕಾರಣಕ್ಕೆ ಭಕ್ತರಿಗೆ ನಿರ್ಬಂಧ ಹೇರಿದ್ದ ಜಿಲ್ಲಾಡಳಿತ ಅದನ್ನು ತೆಗೆದು ಹಾಕಿದೆ. ಹೀಗಾಗಿ ಭಕ್ತರು ಭೇಟಿ ನೀಡಬಹುದಾಗಿದೆ.
ಭಕ್ತರ ಆಕ್ರೋಶಕ್ಕೆ ಮಣಿದ ಸರ್ಕಾರ ಹಾಸನಾಂಬೆಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಅಕ್ಟೋಬರ್ 29ರಿಂದ ನವೆಂಬರ್ 5ರ ತನಕ ದರ್ಶನ ಪಡೆಯಬಹುದು. ಅದು ಬೆಳಗ್ಗೆ 6 ರಿಂದ 8ಗಂಟೆಯ ತನಕ. ಮಧ್ಯಾಹ್ನ 1ರಿಂದ 3ಗಂಟೆಯ ತನಕ ನೈವೇದ್ಯ ಸಮರ್ಪಣೆ ಇರುತ್ತೆ.