ಪ್ರಜಾಸ್ತ್ರ ಸುದ್ದಿ
ವಿಜಯಪುರ: ಮಹಾರಾಷ್ಟ್ರದ ಘಟ್ಟ ಪ್ರದೇಶ ಹಾಗೂ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ವಿಜಯಪುರ ಜಿಲ್ಲೆಯ ಕೃಷ್ಣಾ ನದಿ ಮತ್ತೆ ಉಕ್ಕಿ ಹರಿಯುತ್ತಿದೆ. ಇದ್ರಿಂದಾಗಿ ಜಿಲ್ಲೆಯ ಆಲಮಟ್ಟಿ ಡ್ಯಾಂನಿಂದ 2.20 ಲಕ್ಷ ಕ್ಯುಸೆಕ್ ನೀರನ್ನು ಹೊರಕ್ಕೆ ಬಿಡಲಾಗಿದೆ.
ಇನ್ನು ಒಳ ಹರಿವು 1,34,790 ಕ್ಯುಸೆಕ್ ದಾಖಲಾಗಿದೆ. ಇದರ ಪರಿಣಾಮ ಕೃಷ್ಣಾ ನದಿ ಪಾತ್ರದ ಜನರಲ್ಲಿ ಪ್ರವಾಹದ ಆತಂಕ ಶುರುವಾಗಿದ್ದು, ನದಿಗೆ ಇಳಿಯದಂತೆ ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಲಾಗಿದೆ. ಅಲ್ದೇ, ಜಾನುವಾರುಗಳನ್ನ ಸಹ ನೀರಿಗೆ ಬಿಡದಂತೆ ಸೂಚಿಸಲಾಗಿದೆ. ಸೋಮವಾರದ ಸಂಗ್ರಹ 114.57 ಟಿಎಂಸಿ ಇತ್ತು. ಗರಿಷ್ಠ ಸಂಗ್ರಹ 123 ಟಿಎಂಸಿ ಇದೆ.