ವರುಣನ ಆರ್ಭಟಕ್ಕೆ ತತ್ತರಿಸಿದ ಬೆಂಗಳೂರು

253

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯದ ಅನೇಕ ಕಡೆ ವರುಣನ ಆರ್ಭಟ ಜೋರಾಗಿದೆ. ಅದರಲ್ಲೂ ಸಿಲಿಕಾನ್ ಸಿಟಿ ಬೆಂಗಳೂರು ಅಕ್ಷರಶಃ ನಲುಗಿ ಹೋಗಿದೆ. ಇದು ಬರೀ ಇವತ್ತಿನ ಕಥೆಯಲ್ಲ. ಪ್ರತಿವರ್ಷ ಮಳೆಗಾಲ ಶುರುವಾದರೆ ಐಟಿ ಸಿಟಿಯ ಹಣೆಬರಹವೇ ಇಷ್ಟು.

ಹೌದು, ಬೆಂಗಳೂರು ಬಹುತೇಕ ಏರಿಯಾಗಳು ಒಂದು ರೀತಿಯಲ್ಲಿ ದ್ವೀಪದ ರೀತಿಯಾಗಿವೆ. ನಗರದಲ್ಲಿಯೇ ಬೋಟ್ ಮೂಲಕ ಜನರನ್ನು ರಕ್ಷಿಸುವ ಸ್ಥಿತಿ ನಿರ್ಮಾಣವಾಗಿದೆ. ಪ್ರತಿಷ್ಠಿತ ಬಡಾವಣೆಗಳ ಪರಿಸ್ಥಿತಿಯೇ ಹೀಗಿರಬೇಕಾದರೆ ಸ್ಲಂ ಬೋರ್ಡ್ ಗಳಲ್ಲಿನ ಪರಿಸ್ಥಿತಿ ಹೇಗಿರಬೇಡ ಎಂದು ಒಮ್ಮೆ ಯೋಚಿಸಿ.

ಕೆ.ಆರ್ ಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ

ಬೆಂಗಳೂರು ಅಭಿವೃದ್ಧಿ ದೃಷ್ಟಿಯಿಂದ ಪ್ರತ್ಯೇಕವಾಗಿ ಅದಕ್ಕಾಗಿಯೇ ಒಬ್ಬರು ಸಚಿವರನ್ನು ಮಾಡಲಾಗಿದೆ. ಸಿಎಂ ಆದಿಯಾಗಿ ಬಹುತೇಕ ಶಾಸಕರು ಸಹ ಬೆಂಗಳೂರಿನಲ್ಲಿಯೇ ಠಿಕಾಣಿ ಹೂಡುತ್ತಾರೆ. ಹೀಗಿದ್ದರೂ ಅಲ್ಲಿನ ಪರಿಸ್ಥಿತಿ ಸರಿಪಡಿಸುವ ಆಗದಷ್ಟು ಭ್ರಷ್ಟರಾಗಿದ್ದಾರೆ ಅನ್ನೋದಕ್ಕೆ ಆಗಾಗ ಇಂತಹ ಸಾಕ್ಷಿಗಳು ಸಿಗುತ್ತವೆ.




Leave a Reply

Your email address will not be published. Required fields are marked *

error: Content is protected !!