ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಧಾರ್ಮಿಕ ಹೆಸರಿನಲ್ಲಿ ಯಾರೇ ಹತ್ಯೆಗಳನ್ನು ಮಾಡಿದರು ಅದು ತಪ್ಪು ಎಂದು ಸೌಥ್ ಸಿನಿ ದುನಿಯಾದ ಸ್ಟಾರ್ ನಟಿ ಸಾಯಿ ಪಲ್ಲವಿ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿದ್ದರು. ಇದಕ್ಕೆ ಅವರು ಕಾಶ್ಮೀರಿ ಪಂಡಿತರ ಹತ್ಯೆಯ ಕುರಿತಾದ ಸಿನಿಮಾ ಹಾಗೂ ಗೋಸಾಗಾಟ ಮಾಡುತ್ತಿದ್ದಾನೆ ಎಂದು ಮುಸ್ಲಿಂ ವ್ಯಕ್ತಿಯೊಬ್ಬನ ಹತ್ಯೆ ಮಾಡಿರುವುದರಲ್ಲಿ ವ್ಯತ್ಯಾಸವೇನಿದೆ ಎಂದಿದ್ದರು.
ನಟಿ ಈ ರೀತಿ ಹೇಳುತ್ತಿದ್ದಂತೆ ದೇಶ್ಯಾದ್ಯಂತ ಪರ ವಿರೋಧದ ಚರ್ಚೆಗಳು ನಡೆದವು. ಸೋಷಿಯಲ್ ಮೀಡಿಯಾದಲ್ಲಿ ನಟಿಯ ಪರ-ವಿರೋಧ ವ್ಯಾಪಕತೆ ಪಡೆದುಕೊಂಡಿತು. ಕೆಲ ಮಾಧ್ಯಮಗಳು ಆಕೆಯ ಮಾತುಗಳನ್ನು ತಿರುಚಿ ಬಾಯಿಗೆ ಬಂದಂತೆ ಮಾತನಾಡಿದವು. ಈ ಬಗ್ಗೆ ಶನಿವಾರ ನಟಿ ತಮ್ಮ ಮಾತುಗಳಿಗೆ ಸ್ಪಷ್ಟನೆ ಕೊಟ್ಟಿದ್ದಾರೆ.
ನಾನು ಒಬ್ಬಳು ವೈದ್ಯಕೀಯ ಪದವೀಧರೆಯಾಗಿದ್ದು ಎಲ್ಲ ಜೀವಗಳು ಸಮಾನ ಹಾಗೂ ಎಲ್ಲವೂ ಮುಖ್ಯವೆಂದು ತಿಳಿದುಕೊಂಡಿದ್ದೇನೆ. ನಮ್ಮಲ್ಲಿ ಇನ್ನೊಬ್ಬರ ಜೀವ ತೆಗೆಯುವ ಹಕ್ಕು ಯಾರಿಗೂ ಇಲ್ಲ. ಹತ್ಯೆಯನ್ನು ಸಮರ್ಥಿಸುವ ಯುವ ಸಮೂಹ ನೋಡಿ ನನಗೆ ಗೊಂದಲವಾಯಿತು. ನಾನು ಮೊದಲು ಹೇಳಿದಂತೆ ಎಡ ಬಲ ಗೊತ್ತಿಲ್ಲ. ಮನುಷ್ಯತ್ವದ ಪರ ಎಂದಿದ್ದಾರೆ. ಹೀಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಳ್ಳುತ್ತಾ ನಾನು ಇದೆ ಮೊದಲ ಬಾರಿಗೆ ಈ ರೀತಿಯಾಗಿ ಮಾತನಾಡಲು ಬಂದಿದ್ದೇನೆ. ಕಾರಣ, ನನ್ನ ಮಾತುಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ ಅನ್ನೋ ಆತಂಕದಲ್ಲಿ. ನಾನು ಮಾತನಾಡುವ ಪೂರ್ವದಲ್ಲಿ ಎರಡು ಬಾರಿ ಯೋಚಿಸುತ್ತೇನೆ. ಇದನ್ನು ತಿಳಿಸಲು ನಾನು ಬಹಳ ಸಮಯ ತೆಗೆದುಕೊಂಡಿದ್ದರೆ ಕ್ಷಮೆ ಇರಲಿ ಎಂದಿದ್ದಾರೆ ಹೊರತು, ಕ್ಷಮೆ ಕೇಳುವ ಹೇಳಿಕೆಯನ್ನು ನಾನು ಏನೂ ನೀಡಿಲ್ಲ ಅನ್ನೋದು ಸ್ಪಷ್ಟಪಡಿಸಿದ್ದಾರೆ.
ಪೂರ್ತಿ ವಿಡಿಯೋವನ್ನು ನೋಡಿದಾಗ ನಟಿ ಸಾಯಿ ಪಲ್ಲವಿ ಏನು ಹೇಳಿದ್ದಾರೆ ಅನ್ನೋದು ತಿಳಿಯುತ್ತೆ. ಆದರೆ, ನಟಿ ಸಾಯಿ ಪಲ್ಲವಿ ಕ್ಷಮೆ ಕೇಳಿದ್ದಾರೆ ಎಂದು ಹೇಳುವ ಮೂಲಕ ಕೆಲ ಮಾಧ್ಯಮಗಳು ತಾವು ಗೆದ್ದಿದ್ದೇವೆ ಎಂದು ಹೇಳಿಕೊಳ್ಳುತ್ತಿವೆ. ಇದಕ್ಕೂ ಸಹ ಜನರು ಸೋಷಿಯಲ್ ಮೀಡಿಯಾದಲ್ಲಿ ತಿರುಗೇಟು ನೀಡುತ್ತಿದ್ದಾರೆ. ಸಾಯಿ ಪಲ್ಲವಿ ನೀಡಿದ್ದು ಸ್ಪಷ್ಟನೆ. ಕ್ಷಮೆ ಅಲ್ಲ ಎಂದಿದ್ದಾರೆ.