ಸಾಯಿ ಪಲ್ಲವಿ ವಿರುದ್ಧ ದೂರು

309

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಸೌಥ್ ಸಿನಿ ದುನಿಯಾದ ಲೇಡಿ ಪವರ್ ಸ್ಟಾರ್ ಸಾಯಿ ಪಲ್ಲವಿ, ತಮ್ಮ ಮುಂಬರುವ ವಿರಾಟ ಪರ್ವಂ ಚಿತ್ರದ ಪ್ರಚಾರದ ಹಿನ್ನೆಲೆಯಲ್ಲಿ ಯೂಟ್ಯೂಬ್ ಚಾನೆಲ್ ವೊಂದಕ್ಕೆ ಸಂದರ್ಶನ ನೀಡಿದ್ದಾರೆ. ಈ ವೇಳೆ ಅವರು ನೀಡಿದ ಹೇಳಿಕೆ ವಿರುದ್ಧ ವಿರೋಧಗಳು ವ್ಯಕ್ತವಾಗುತ್ತಿವೆ.

ಕಾಶ್ಮೀರಿ ಪಂಡಿತರ ಹತ್ಯೆ ಮಾಡುವುದು ಎಷ್ಟು ತಪ್ಪೋ, ಗೋರಕ್ಷಣೆ ಹೆಸರಲ್ಲಿ ಜೈ ಶ್ರೀರಾಮ್ ಎಂದು ಹೇಳಿ ಹತ್ಯೆ ಮಾಡುವುದು ತಪ್ಪು? ಇದರಲ್ಲಿ ವೆತ್ಯಾಸವೇನಿದೆ ಎಂದಿದ್ದರು. ಇದಕ್ಕೆ ಒಂದು ಕಡೆ ವಿರೋಧ, ಮತ್ತೊಂದು ಕಡೆ ಬೆಂಬಲ ವ್ಯಕ್ತವಾಗುತ್ತಿದೆ. ಇದೀಗ ಸಾಯಿ ಪಲ್ಲವಿ ವಿರುದ್ಧ ದೂರು ದಾಖಲಾಗಿದೆ.

ಹೈದರಾಬಾದ್ ನಲ್ಲಿ ಭಜರಂಗದಳದ ವಿಧ್ಯಾನಗರ ಜಿಲ್ಲಾ ಸಂಯೋಜಕ್, ಸುಲ್ತಾನ್ ಬಜಾರ್ ಪಿಎಸ್ ನಲ್ಲಿ ಪ್ರಕರಣ ದಾಖಲಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!