ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಭರ್ಜರಿ ಮಳೆಯಾಗ್ತಿದೆ. ಸಾಯಂಕಾಲ 4 ಗಂಟೆಯಿಂದ ಶುರುವಾದ ಮಳೆ ನಗರದಲ್ಲಿ ಮುಂದುವರೆದಿದೆ. ಇದ್ರಿಂದಾಗಿ ಬೆಂಗಳೂರು ನಗರದ ಜನತೆಗೆ ಒಂದಿಷ್ಟು ತಂಪೆರದಿದೆ. ಇದರ ಜೊತೆಗೆ ಒಂದಿಷ್ಟು ಹೈರಾಣು ಸ್ಥಿತಿ ಸಹ ನಿರ್ಮಾಣವಾಗಿದೆ.
ಮಲ್ಲೇಶ್ವರಂ, ಮೆಜೆಸ್ಟಿಕ್, ಗಾಂಧಿನಗರ, ಶಿವಾನಂದ ಸರ್ಕಲ್, ಎಸ್ ಪಿ ರೋಡ್, ಬಳೆಪೇಟೆ, ರಾಜಾಜಿನಗರ ಸೇರಿದಂತೆ ಹಲವು ಏರಿಯಾಗಳಲ್ಲಿ ಮಳೆಯ ಆರ್ಭಟ ಜೋರಾಗಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿವೆ. ಇದ್ರಿಂದಾಗಿ ಬೈಕ್ ಗಳು ನೀರಿನಲ್ಲಿ ಸಿಲುಕಿಕೊಂಡಿವೆ.