ಪ್ರಜಾಸ್ತ್ರ ಸುದ್ದಿ
ಮೈಸೂರು: ಸೋಮವಾರ ಇಡೀ ರಾತ್ರಿ ಮಳೆಯಾಗಿರುವುದರಿಂದ ಸೇತುವೆಯೊಂದು ಕುಸಿದಿದೆ. ಹಲವು ಕಡೆ ಮರಗಳು ಬಿದ್ದಿವೆ. ಚರಂಡಿ ನೀರು ಮನೆಗಳಿಗೆ ನುಗ್ಗಿವೆ. ಸೋಮವಾರ ರಾತ್ರಿಯಿಂದ ಮಂಗಳವಾರ ಬೆಳಗ್ಗೆ 8 ಗಂಟೆಯವರೆಗೂ ಮಳೆಯಾಗಿದೆ. 10 ಸೆ.ಮೀಗೂ ಹೆಚ್ಚು ಮಳೆಯಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವರಿ ಕೇಂದ್ರದಿಂದ ತಿಳಿದು ಬಂದಿದೆ.
ಬೋಗಾದಿಯ ನಾಗಲಿಂಗೇಶ್ವರ ದೇವಸ್ಥಾನದ ಹಿಂದಿನ ಸೇತುವೆ ಕುಸಿದಿದೆ. ರಾಜಕುಮಾರ ರಸ್ತೆ, ಮೈಮುಲ್ ಹತ್ತಿರದ ಬನ್ನೂರು ರಸ್ತೆಯಲ್ಲಿನ ಮನೆಗಳಿಗೆ ಚರಂಡಿ ನೀರು ನುಗ್ಗಿವೆ. ಪಾಲಿಕೆಯಿಂದ ರಕ್ಷಣಾ ಕಾರ್ಯ ನಡೆದಿದೆ.