ಎಪಿಎಂಸಿ ಕಾಯ್ದೆ ಕೈಬಿಡಲು ಗೋಕಾಕನಲ್ಲಿ ರೈತರು ಆಗ್ರಹ

294

ಗೋಕಾಕ: ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿರುವುದು ಅತ್ಯಂತ ಆತಂಕದ ಸಂಗತಿ ಎಂದು ಗೋಕಾಕ ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯ ರೈತ ಸಂಘ ಹಸಿರು ಸೇನೆ ವತಿಯಿಂದ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯ್ತು.

ಎಂಪಿಎಂಸಿ ಕಾಯ್ದೆ ತಿದ್ದುಪಡಿ ತರುವುದ್ರಿಂದ ರೈತರ ಬದುಕು ಹೈರಾಣಾಗುತ್ತೆ. ಅವರ ಜೀವನದ ಜೊತೆ ರಾಜ್ಯ ಸರ್ಕಾರ ಚೆಲ್ಲಾಟವಾಡ್ತಿದೆ. ರೈತರ ಬಗ್ಗೆ ಕಾಳಜಿ ಇದ್ದರೆ ಕೂಡಲೇ ಇದ್ರಿಂದ ಹಿಂದಕ್ಕೆ ಸರಿಯಬೇಕು. ಇಲ್ಲದಿದ್ರೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಹೇಳಿದ್ದಾರೆ.

ಮಿನಿ ವಿಧಾನಸೌಧದಲ್ಲಿ ತಹಶೀಲ್ದಾರ್ ಮನವಿ ಸಲ್ಲಿಸುವ ವೇಳೆ, ಸತ್ತೆಪ್ಪ ಮಲ್ಲಾಪುರೆ, ಗೋಪಾಲ ಕಕನೂರ, ಶಂಕರ ಮದಿಹಳ್ಳಿ, ಬಸು ನಾಯ್ಕ, ಯಲ್ಲಪ್ಪ ತಿಗಡಿ, ಗಣಪತಿ ಈಳಿಗೇರ ಸೇರಿದಂತೆ ಅನೇಕರು ಹಾಜರಿದ್ರು.




Leave a Reply

Your email address will not be published. Required fields are marked *

error: Content is protected !!