ಪ್ರಜಾಸ್ತ್ರ ಸುದ್ದಿ
ಬೆಳಗಾವಿ: ಮನೆ ಮುಂದೆ ಆಟವಾಡ್ತಿದ್ದ ಮಗವೊಂದು ಚರಂಡಿ ನೀರಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ ಗೋಕಾಕ ತಾಲೂಕಿನ ಲೊಳಸರ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಒಂದು ವರ್ಷದ ಸಾದಿಕಾ ಸದ್ದಾಂ ತಹಶ್ಲೀದಾರ್ ಅನ್ನೋ ಮಗು ಮೃತಪಟ್ಟಿದೆ.
ಚರಂಡಿ ನೀರು ಹೋಗಲು ದಾರಿಯಿಲ್ಲದೆ ಮನೆ ಮುಂದೆ ನಿಂತುಕೊಂಡಿದೆ. ಸಂಬಂಧಪಟ್ಟವರು ಸಹ ಅದರ ಕಡೆ ಗಮನ ಹರಿಸಿಲ್ಲ. ಇದ್ರಿಂದಾಗಿ ಮನೆ ಮುಂದೆ ಆಡ್ತಿದ್ದ ಮಗು ಬಿದ್ದು ಸಾವನ್ನಪ್ಪಿದೆ. ಈ ಬಗ್ಗೆ ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.