ಉತ್ತರಕಾಶಿ: ನೆರೆ ಸಂತ್ರಸ್ತರ ರಕ್ಷಣೆಗೆ ಹೋದ ಹೆಲಿಕಾಪ್ಟರ್ ವೊಂದು ಪತನಗೊಂಡ ಪರಿಣಾಮ ಮೂವರು ದುರ್ಮರಣ ಹೊಂದಿದ್ದಾರೆ. ಉತ್ತರಾಖಂಡದ ಉತ್ತರ ಕಾಶಿ ಜಿಲ್ಲೆಯ ಮೊಲ್ಡಿ ಎಂಬಲ್ಲಿ ಈ ಘಟನೆ ನಡೆದಿದೆ.
ಮೃತರನ್ನ ಕ್ಯಾಪ್ಟನ್ ಲಾಲ್, ಕೋ ಪೈಲಟ್ ಶೈಲೇಶ ಹಾಗೂ ಓರ್ವ ಸ್ಥಳೀಯ ರಾಜ್ಪಾಲ ಎಂಬುವುದು ತಿಳಿದು ಬಂದಿದೆ. ಪರಿಹಾರ ಸಮಾಗ್ರಿಗಳನ್ನ ಹೊತ್ತುಕೊಂಡು ಉತ್ತರಕಾಶಿ ಜಿಲ್ಲೆಯ ಮೊಲ್ಡಿಯಲ್ಲಿ ಹೆಲಿಕಾಪ್ಟರ್ ಇಳಿಯುವ ಟೈಂನಲ್ಲಿ ವಿದ್ಯುತ್ ತಂತಿ ತಗುಲಿ ಈ ದುರ್ಘಟನೆ ನಡೆದಿದೆ.
ಕಳೆದ ಕೆಲ ದಿನಗಳಿಂದ ಉತ್ತರಾಖಂಡದಲ್ಲಿ ಉಂಟಾದ ಪ್ರವಾಹದಿಂದ 35ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ತಾನ್ಸ್ ನದಿ ಉಕ್ಕಿ ಹರಿಯುತ್ತಿದ್ದ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರಕ್ಕೆ ತಲೆನೋವಾಗಿದೆ.