ಇಷ್ಟು ದಿನ ದಸರಾ ಮಂತ್ರಿ.. ಇಂದಿನಿಂದ ವಸತಿ ಸಚಿವ

368

ಮೈಸೂರು: ಇಷ್ಟು ದಿನ ದಸರಾ ಮಂತ್ರಿಯಾಗಿ ಕೆಲಸ ಮಾಡಿದೆ. ಇಂದಿನಿಂದ ವಸತಿ ಸಚಿವನಾಗಿ ಸಂಪುಟದಲ್ಲಿ ಭಾಗವಹಿಸುತ್ತೇನೆ ಎಂದು ಮೈಸೂರು ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

ಮಾಧ್ಯಮಗೋಷ್ಠಿಯಲ್ಲಿ ಮಾತ್ನಾಡಿದ ವಸತಿ ಸಚಿವರು, ದಸರಾ ಅಂದ್ರೆ ಕೇವಲ ಅಂಬಾರಿ ಮೆರವಣಿಗೆ ಅಂದುಕೊಂಡಿದ್ದೆ. ಇಷ್ಟೊಂದು ಆಳವಾಗಿರುತ್ತೆ ಅಂತಾ ಅಂದ್ಕೊಂಡಿರ್ಲಿಲ್ಲ ಅಂತಾ ತಮ್ಮ ಅಭಿಪ್ರಾಯ ತಿಳಿಸಿದ್ರು. ದಸರಾ ಯಶಸ್ವಿಯಾಗಿದೆ. ಇದಕ್ಕೆ ಮಾಧ್ಯಮದವರ ಸಹಕಾರ ಸಹ ಮುಖ್ಯವಾಗಿದೆ ಅಂತಾ ಹೇಳಿದ್ರು.

ದಸರಾ ಸಂದರ್ಭದಲ್ಲಿ ಎಲ್ಲರ ಸಹಕಾರ ಪಡೆದಿದ್ದೇನೆ. ಮೂರ್ನಾಲ್ಕು ಬಾರಿ ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಕರೆ ಮಾಡಿ ಮಾತ್ನಾಡಿದ್ದೇನೆ. ಎಲ್ಲರಿಗೂ ಧನ್ಯವಾದಗಳನ್ನ ಹೇಳಲು ಮಾಧ್ಯಮಗೋಷ್ಠಿ ಕರೆದಿದ್ದೇನೆ ಅಂತಾ ತಿಳಿಸಿದ್ರು. ಇನ್ನು ಇಷ್ಟು ದಿನ ದಸರಾ ಮಂತ್ರಿಯಾಗಿದ್ದೆ. ಇಂದಿನಿಂದ ವಸತಿ ಸಚಿವ. ಸಂಪುಟದಲ್ಲಿ ಭಾಗಿಯಾಗಿ, ಸಂತ್ರಸ್ತರಿಗೆ ಮನೆ ಕಟ್ಟಿಕೊಡುವ ಕೆಲಸ ಮಾಡ್ತೀನಿ ಅಂತಾ ಹೇಳಿದ್ರು.




Leave a Reply

Your email address will not be published. Required fields are marked *

error: Content is protected !!