ಮೈಸೂರು: ವಿಶ್ವವಿಖ್ಯಾತ ಮೈಸೂರು ಜಂಬೂ ಸವಾರಿ ಮುಗಿದಿದೆ. ದಸರಾ ಹಬ್ಬದ ಹಿನ್ನೆಲೆಯಲ್ಲಿ ಕೆಲ ದಿನಗಳ ಮುಂಚಿತವಾಗಿಯೇ ಬಂದು ಮೈಸೂರು ಸೇರಿದ್ದ ಅರ್ಜುನ ಅಂಡ್ ಟೀಂ ಆನೆಗಳು ಇದೀಗ ರಿಲ್ಯಾಕ್ಸ್ ಮೂಡ್ ನಲ್ಲಿವೆ.
ನಾಡಹಬ್ಬಕ್ಕೂ ಮೊದ್ಲೇ ಅರಮನೆ ನಗರಿಗೆ ಬಂದು ಪ್ರತಿಯೊಂದು ತಾಲೀಮಿನಲ್ಲಿ ಭಾಗವಹಿಸಿ, 409ನೇ ದಸರಾ ಮಹೋತ್ಸವವನ್ನ ಯಶಸ್ವಿಗೊಳಿಸಿದ ಆನೆಗಳು ಇದೀಗ ಒಂದಿಷ್ಟು ವಿಶ್ರಾಂತಿ ಪಡೆಯುತ್ತಿವೆ. ಇದಾದ ಬಳಿಕ ಅರ್ಜುನ, ಬಲರಾಮ, ಲಕ್ಷ್ಮಿ, ವಿಜಯ ಸೇರಿದಂತೆ ಗಜಪಡೆಗೆ ಸಾಂಪ್ರದಾಯಕ ಬಿಳ್ಕೋಡುಗೆ ನೀಡಲಾಗುತ್ತೆ. ಅಲ್ಲಿಂದ ಶಿಬಿರಕ್ಕೆ ತೆರಳಲಿವೆ.