ಪ್ರಜಾಸ್ತ್ರ ಸುದ್ದಿ
ಹುಬ್ಬಳ್ಳಿ: ಕಳೆದ ಶನಿವಾರ ರಾತ್ರಿ ನಡೆದ ಗಲಭೆಗೆ ಸಂಬಂಧಿಸಿದಂತೆ, ಕೃತ್ಯದ ಮಾಸ್ಟರ್ ಮೈಂಡ್ ಎಂದು ಹೇಳಲಾಗುತ್ತಿರುವ ವಸೀಂ ಪಠಾಣ್ ವಿಡಿಯೊಂದನ್ನು ಮಾಡಿ ಬಿಟ್ಟಿದ್ದಾನೆ. ನನ್ನನ್ನು ಗಲಭೆಯ ಮಾಸ್ಟರ್ ಮೈಂಡ್ ಎಂದು ಹೇಳಲಾಗುತ್ತಿದೆ. ಆದರೆ, ನಾನು ಪ್ರಚೋದನಾತ್ಮಕ ಭಾಷಣ ಮಾಡಿಲ್ಲ. ಶಾಂತಿಯಿಂದ ಇರುವಂತೆ ಹೇಳುತ್ತಿದ್ದೆ. ಎಲ್ಲರಿಗೂ ಕೇಳಬೇಕು ಎಂದು ಪೊಲೀಸರೆ ನನ್ನನ್ನು ವಾಹನದ ಮೇಲೆ ಹತ್ತುವಂತೆ ಹೇಳಿದ್ದರು. ಆದರೆ, ಇದೀಗ ನನ್ನನ್ನೇ ಆರೋಪಿ ಮಾಡಿದ್ದಾರೆ ಎಂದು ವಿಡಿಯೋದಲ್ಲಿ ಹೇಳಿದ್ದಾನೆ.
ನನಗೆ ಜೀವ ಭಯವಿದೆ. ಪರಿಸ್ಥಿತಿ ತಿಳಿಯಾದ ಮೇಲೆ ನಾನೇ ಬರುತ್ತೇನೆ. ನನ್ನ ತಪ್ಪಿದ್ದರೆ ಪೊಲೀಸರು ಕ್ರಮ ತೆಗೆದುಕೊಳ್ಳಲಿ. ಗಲಭೆ ಬಗ್ಗೆ ಗೊತ್ತಾದಾಗ ನಿಯಂತ್ರಿಸಲು ಹೋಗಿದ್ದೆ. ಕರೆಂಟ್ ಹೋಯ್ತು. ಕೆಲವರು ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬಂದಿದ್ದರು ಎಂದು ಹೇಳಿದ್ದಾನೆ.