ಪ್ರಜಾಸ್ತ್ರ ಸುದ್ದಿ
ಗುವಾಹಟಿ: ಡಿಸೆಂಬರ್ 26, 2016ರಲ್ಲಿ ಅಸ್ಸಾಂನ ಕಚಾರ್ ಜಿಲ್ಲೆಯ ಸೋನೈ ರಸ್ತೆ ಪ್ರದೇಶದಲ್ಲಿ 11 ಜನ ದುಷ್ಕರ್ಮಿಗಳು ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ್ದಾರೆ. ಈ ಘಟನೆ ಸಂಬಂಧ ತನಗೆ ನ್ಯಾಯ ಬೇಕು ಎಂದು ಕೊಲೆಯಾದ ವ್ಯಕ್ತಿಯ 4 ವರ್ಷದ ಮಗ ಪ್ಲೇ ಕಾರ್ಡ್ ಹಿಡಿದು ಮನವಿ ಮಾಡುತ್ತಿದ್ದಾನೆ.
ಸಹಿದ್ ಅಲೋಮ್ ಲಾಸ್ಕರ್ ಎಂಬಾತನನ್ನ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಈ ಸಂಬಂಧ ಆತನ ಮಗ ರಿಜ್ವಾನ್ ಅಸ್ಸಾಂ ಸಿಎಂ, ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಬಳಿ ನ್ಯಾಯಕ್ಕಾಗಿ ಮನವಿ ಮಾಡಿದ್ದಾನೆ.
ನನ್ನ ತಂದೆಯ ಕೊಲೆಯಾದಗ ನನಗೆ ಕೇವಲ 3 ತಿಂಗಳು. ನನ್ನ ತಾಯಿ ಹೋರಾಟ ಮಾಡಿಕೊಂಡು ಬರುತ್ತಿದ್ದರು ನ್ಯಾಯ ಸಿಕ್ಕಿಲ್ಲ. ಅಪರಾಧಿಗಳನ್ನು ಇದುವರೆಗೂ ಬಂಧಿಸಿಲ್ಲವೆಂದು ಬಾಲಕ ಹೇಳಿದ್ದು, ತನಗೆ ನ್ಯಾಯ ಕೊಡಿಸಿ ಎನ್ನುತ್ತಿದ್ದಾನೆ. ಇದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.