ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಈ ಮೊದ್ಲು ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದ ವಿಜಯ ಶಂಕರ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಐಎಎಂ ಜ್ಯೂಲಿಯರ್ ಶಾಪ್ ನ ಸಾವಿರಾರು ಕೋಟಿ ಹಗರಣದಲ್ಲಿ ವಿಜಯ ಶಂಕರ ಆರೋಪಿಯಾಗಿದ್ರು.
ಜಯನಗರದಲ್ಲಿರುವ ಅವರ ನಿವಾಸದಲ್ಲಿ ಹಿರಿಯ ಐಎಎಸ್ ಅಧಿಕಾರಿ ನೇಣಿಗೆ ಶರಣಾಗಿದ್ದಾರೆ. ಮನೆಯಲ್ಲಿ ಪತ್ನಿ ಹಾಗೂ ಮಗಳು ಮಾತ್ರ ಇದ್ದರು. ಇಂದು ಸಂಜೆ 7ಗಂಟೆಗೆ ಸುಮಾರಿಗೆ ನೇಣಿಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ. ವಿಜಯನಗರದಲ್ಲಿರುವ ಅವರ ನಿವಾಸಕ್ಕೆ ಪೊಲೀಸ್ರು ಬಂದಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳು ಸಹ ಆಗಮಿಸಿದ್ದು, ಕುಟುಂಬಸ್ಥರಿಂದ ಪ್ರಾಥಮಿಕ ಮಾಹಿತಿಯನ್ನ ಪಡೆಯಲಿದ್ದಾರೆ.
ಐಎಎಂ ಹಗರಣದಲ್ಲಿ ಒಂದೂವರೆ ಕೋಟಿ ರೂಪಾಯಿ ಲಂಚ ಪಡೆದಿದ್ರು ಎಂದು ಹೇಳಲಾಗಿತ್ತು. ಹೀಗಾಗಿ ಬಿ.ಎಂ ವಿಜಯ ಶಂಕರವರನ್ನ ಕಳೆದ ಜುಲೈ 8ರಂದು ವಿಶೇಷ ತನಿಖಾ ತಂಡ ಅವರನ್ನ ಬಂಧಿಸಿದ್ರು. ಬಳಿಕ ಅವರು ಜಾಮೀನು ಪಡೆದು ಹೊರ ಬಂದಿದ್ರು. ಅಲ್ದೆ, ಸರ್ಕಾರ ಅವರನ್ನ ಸೇವೆಯಿಂದ ಅಮಾನತು ಮಾಡಿತ್ತು. ಇನ್ನು ಆ ಆತ್ಮಹತ್ಯೆ ಪ್ರಕರಣದಿಂದ ಐಎಎಂ ಕಂಪನಿಯ ಸಾವಿರಾರು ಕೋಟಿ ರೂಪಾಯಿ ಹಗರಣಕ್ಕೆ ತಿರುವು ಸಿಗಲಿದೆ.