ವಿಜಯಪುರ ಡಿಸಿ ದಿಢೀರ್ ವರ್ಗಾವಣೆ: ಸಾರ್ವಜನಿಕರ ಅಸಮಾಧಾನ

480

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಇಂದು 14 ಜನ ಐಎಎಸ್ ಅಧಿಕಾರಿಗಳನ್ನ ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ. ಇದರಲ್ಲಿ ವಿಜಯಪುರ ಜಿಲ್ಲಾಧಿಕಾರಿಯಾಗಿದ್ದ ವೈ.ಎಸ್ ಪಾಟೀಲ ಅವರನ್ನ ದಿಢೀರ್ ವರ್ಗಾವಣೆ ಮಾಡಿರುವುದಕ್ಕೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವೈ.ಎಸ್. ಪಾಟೀಲ ಅವರು ಕೋವಿಡ್ 19 ವಿರುದ್ಧದ ಹೋರಾಟವನ್ನು ಸಮರ್ಥವಾಗಿ ನಿಭಾಯಿಸ್ತಿದ್ರು. ಆದ್ರೇ, ಏಕಾಏಕಿ ಸರ್ಕಾರ ವರ್ಗಾವಣೆ ಮಾಡಿದ್ದು ಜಿಲ್ಲೆಯ ಜನತೆಗೆ ಅಸಮಾಧಾನ ತಂದಿದೆ. ಇವರ ಜಾಗಕ್ಕೆ ಪಿ.ಸುನೀಲಕುಮಾರ ಅವರ ಅವರನ್ನ ನೇಮಿಸಿದೆ.

ಇನ್ನು ವೈ.ಎಸ್. ಪಾಟೀಲರನ್ನ ಮೈಸೂರು ಅಡ್ಮಿನಿಸ್ಟ್ರೇಟಿವ್ ಟ್ರೇನಿಂಗ್ ಇನ್ಸಟಿಟ್ಯೂನ ಜಾಯಿಂಟ್ ಡೈರೆಕ್ಟರ್ ಹುದ್ದೆ ನೀಡಲಾಗಿದೆ. ಸರ್ಕಾರದ ಈ ಕ್ರಮಕ್ಕೆ ಜಿಲ್ಲೆಯ ಜನತೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಳ್ಳೆಯ ಕೆಲಸಗಳನ್ನ ಮಾಡಿಕೊಂಡು ಹೋಗ್ತಿದ್ದ ಅಧಿಕಾರಿಯನ್ನ ವರ್ಗಾವಣೆ ಮಾಡಿದ್ದು ಸರಿ ಅಲ್ಲವೆಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!