ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರಾಜ್ಯ ಸರ್ಕಾರ ಸೋಮವಾರ 15 ಜನ ಐಎಎಸ್ ಅಧಿಕಾರಿಗಳನ್ನ ವರ್ಗಾವಣೆ ಮಾಡಲಾಗಿದೆ. ಅದರಲ್ಲಿ ನಿತೇಶ ಪಾಟೀಲ ಅವರನ್ನ ಶಿಕ್ಷಣಕಾಶಿ ಧಾರವಾಡದ ಜಿಲ್ಲಾಧಿಕಾರಿಯನ್ನಾಗಿ ನೇಮಕ ಮಾಡಿದೆ. ಈ ಮೊದಲು ಇವರು ಬೆಂಗಳೂರಿನಲ್ಲಿ ಆದಾಯ ತೆರಿಗೆ ಇಲಾಖೆಯ ಎಸಿಯಾಗಿ ಕಾರ್ಯನಿರ್ವಹಿಸಿದ್ದಾರೆ.
ಐಎಎಸ್ ನಿತೇಶ ಪಾಟೀಲ ಅವರು ಆದಾಯ ತೆರಿಗೆ ಇಲಾಖೆಯ ಎಸಿ ಆಗಿರುವ ಟೈಂನಲ್ಲಿ 9 ವಂಚನೆ ಪ್ರಕರಣಗಳನ್ನ ಬೆಳಕಿಗೆ ತಂದಿದ್ದಾರೆ. ಸಣ್ಣಪುಟ್ಟ ಕಂಪನಿಗಳ ಹೆಸರಿನಲ್ಲಿ ಬೃಹತ್ ಕಂಪನಿಗಳು ನಡೆಸುವ ವಂಚನೆಯಾಗಿತ್ತು. ಈ ಮೂಲಕ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಇಂಥಾ ಪ್ರಕರಣಗಳನ್ನ ಬೆಳಕಿಗೆ ತಂದ ದಕ್ಷ ಅಧಿಕಾರಿಯಾಗಿದ್ದಾರೆ.
ಇದಕ್ಕೂ ಮೊದ್ಲು ಚಿತ್ರದುರ್ಗದ ಸಿಇಒ ಆಗಿ ಕಾರ್ಯನಿರ್ವಹಿಸಿದ್ದಾರೆ. ಇಂಗುಗುಂಡಿ ಸೇರಿದಂತೆ ಕೋಟೆನಾಡಿನಲ್ಲಿ ಹತ್ತು ಹಲವು ಕಾರ್ಯಗಳನ್ನ ಮಾಡಿ ಒಳ್ಳೆಯ ಅಧಿಕಾರಿ ಅನ್ನೋ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇಂಥಾ ದಕ್ಷ, ಪ್ರಾಮಾಣಿಕ ಐಎಎಸ್ ಅಧಿಕಾರಿ ನಿತೇಶ ಕೆ ಪಾಟೀಲ ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಪುಟ್ಟ ಗ್ರಾಮದವರು.
ಯೆಸ್, ನಿತೇಶ ಕೆ ಪಾಟೀಲ ಅವರು ಸಿಂದಗಿ ತಾಲೂಕಿನ ಕೆರಟೂಗಿ ಗ್ರಾಮದವರಾಗಿದ್ದಾರೆ. ವಿಜಯಪುರದಲ್ಲಿ ವಿದ್ಯಾಭ್ಯಾಸ ಮುಗಿಸಿದ್ರು. ನಂತರ ನವದೆಹಲಿಯಲ್ಲಿ ಕೋಚಿಂಗ್ ಪಡೆದು ಐಎಎಸ್ ಅಧಿಕಾರಿಯಾಗಿದ್ದಾರೆ.
ಧಾರವಾಡ ಜಿಲ್ಲಾಧಿಕಾರಿಯಾಗುವ ಮೂಲಕ, ಮೊದಲ ಬಾರಿಗೆ ಡಿಸಿ ಹುದ್ದೆಯನ್ನ ಅಲಂಕರಿಸಿದ್ದಾರೆ. ಇದಕ್ಕೂ ಮೊದ್ಲು ಚಿತ್ರದುರ್ಗ ಸಿಇಒ ಹಾಗೂ ಬೆಂಗಳೂರಿನ ಆದಾಯ ತೆರಿಗೆ ಇಲಾಖೆಯ ಎಸಿ ಆಗಿ ಕಾರ್ಯನಿರ್ವಹಿಸಿದ್ದಾರೆ.