ಗುಮ್ಮಟನಗರಿ ಜಿ.ಪಂ ಎಲೆಕ್ಷನ್: ಯಾರಿಗೆ ಅಧ್ಯಕ್ಷ ಗಾದಿ?

410

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಇಂದು ಜಿಲ್ಲಾ ಪಂಚಾಯ್ತಿಯ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ತೀವ್ರ ಹಣಾಹಣಿಯಿದ್ದು, ಯಾರಿಗೆ ಅಧ್ಯಕ್ಷ ಗಾದಿ ಒಲಿಯುತ್ತೆ ಅನ್ನೋ ಕುತೂಹಲ ಮೂಡಿದೆ.

ಬಿಜೆಪಿಯಿಂದ ಭೀಮಾಶಂಕರ ಬಿರಾದಾರ ಆಕಾಂಕ್ಷಿಯಾಗಿದ್ದಾರೆ. ಕಾಂಗ್ರೆಸ್ಸಿನಿಂದ ಸುಜಾತಾ ಕಳ್ಳಿಮನಿ ಅಭ್ಯರ್ಥಿಯಾಗಿದ್ದಾರೆ. ಒಟ್ಟು 42 ಜನ ಸದಸ್ಯರಿರುವ ವಿಜಯಪುರ ಜಿಲ್ಲಾ ಪಂಚಾಯ್ತಿಯಲ್ಲಿ ಬಿಜೆಪಿ-20, ಕಾಂಗ್ರೆಸ್-18, ಜೆಡಿಎಸ್-3, 1 ಪಕ್ಷೇತರ ಸದಸ್ಯರು ಇದ್ದಾರೆ.

ಕಾಂಗ್ರೆಸ್ ಸದಸ್ಯ ಶಿವಯೋಗೆಪ್ಪ ನೇದಲಗಿ ರಾಜೀನಾಮೆಯಿಂದ ತೆರವಾಗಿರುವ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ಇದರ ನಡುವೆ ಕೈನ ಮೂವರು ಬಿಜೆಪಿ ಸೇರಿರುವ ವದಂತಿ, ಬಿಜೆಪಿಯ ಮೂವರು ಕಾಂಗ್ರೆಸ್ ಪಡೆಯಲ್ಲಿದ್ದಾರೆ ಅನ್ನೋ ವದಂತಿ ಕೇಳಿ ಬರ್ತಿದೆ. ಅಲ್ದೇ, ಮಾಜಿ ಸಚಿವ ಎಂ.ಬಿ ಪಾಟೀಲ ಆಪ್ತ ಬಬಲೇಶ್ವರ ಜಿ.ಪಂ ಕಾಂಗ್ರೆಸ್ ಸದಸ್ಯ ಉಮೇಶ ಕೋಳಕೂರ ಸದಸ್ಯಕ್ಕೆ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಹಂಗಾಮಿ ಅಧ್ಯಕ್ಷ ಪ್ರಭು ದೇಸಾಯಿ ಅವರಿಗೆ ಉಮೇಶ ಕೋಳಕೂರ ರಾಜೀನಾಮೆ ಸಲ್ಲಿಸಿಕೆ ಮಾಡಿದ್ದಾರೆ. ಹೀಗಾಗಿ ಜೆಡಿಎಸ್ ನ 3, ಓರ್ವ ಪಕ್ಷೇತರ ಸದಸ್ಯರ ಮತಗಳು ನಿರ್ಣಾಯಕವಾಗಿದೆ. ಅದು ಅಲ್ದೇ, ಅಧ್ಯಕ್ಷ ಸ್ಥಾನ ಹಿಂದುಳಿದ ಎ ವರ್ಗಕ್ಕೆ ಮೀಸಲಾಗಿದೆ. ಹೀಗಾಗಿ ಸಾಕಷ್ಟು ಕುತೂಹಲ ಮೂಡಿಸಿದೆ.




Leave a Reply

Your email address will not be published. Required fields are marked *

error: Content is protected !!