ಪತ್ನಿಯ ಅಕ್ರಮದಾಟ ರೆಡ್ ಹ್ಯಾಂಡ್ ಹಿಡಿಯಲು ಬಂದವನಿಗೆ ಶಾಕ್!

376

ಮೈಸೂರು: ಅಕ್ರಮ ಸಂಬಂಧ ಬಯಲಾದ ಪರಿಣಾಮ ವಿವಾಹಿತರಿಬ್ಬರು ನೇಣಿಗೆ ಶರಣಾದ ಘಟನೆ ಮೈಸೂರಿನ ರಮಾಬಾಯಿ ನಗರದಲ್ಲಿ ನಡೆದಿದೆ. ಮೃತರನ್ನ ರಮಾಬಾಯಿ ನಗರದ 34 ವರ್ಷದ ಸಂತೋಷ ಹಾಗೂ ಜೆಪಿ ನಗರದ 35 ವರ್ಷದ ಸುಮಿತ್ರಾ ಎಂದು ಗುರುತಿಸಲಾಗಿದೆ.

ಜೆಪಿ ನಗರದಲ್ಲಿರುವ ಕಾರ್ಖಾನೆಯೊಂದರಲ್ಲಿ ಇವರಿಬ್ಬರು ಕೆಲಸ ಮಾಡ್ತಿದ್ರು. ಈ ವೇಳೆ ಪರಿಚಯವಾಗಿದೆ. ಪರಿಚಯ ಅಕ್ರಮ ಸಂಬಂಧಕ್ಕೆ ದಾರಿ ಮಾಡಿಕೊಟ್ಟಿದೆ. ಈ ವಿಷಯ ತಿಳಿದ ಸುಮಿತ್ರಾ ಗಂಡನ ಮನೆಯವರು ರಾಜಿ ಪಂಚಾಯ್ತಿ ಮಾಡಿ ಇಬ್ಬರಿಗೂ ಎಚ್ಚರಿಕೆ ನೀಡಿದ್ದಾರೆ. ಇದರ ನಡುವೆಯೂ ಅವರ ಸಂಬಂಧ ಮುಂದುವರೆದಿತ್ತು.

ಸಂತೋಷ ಪತ್ನಿ ಊರಿಗೆ ಹೋಗಿದ್ದ ಟೈಂನಲ್ಲಿ ಆತನ ಮನೆಗೆ ಸುಮಿತ್ರಾ ಬಂದಿದ್ದಾಳೆ. ಈ ವಿಷಯ ನೆರೆಹೊರೆಯವರಿಂದ ತಿಳದ ತಕ್ಷಣ ಆಕೆ ವಾಪಸ್ ಬಂದಿದ್ದಾಳೆ. ಆಗ ಇವರಿಬ್ಬರನ್ನ ನೋಡಿದ್ದಾಳೆ. ಇದ್ರಿಂದಾಗಿ ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದಾಳೆ. ಅತ್ತ ಸುಮಿತ್ರಾ ಪತಿ ಸಿದ್ಧರಾಜು ಇವರ ಮನೆಗೆ ಬಂದಿದ್ದಾನೆ. ರೆಡ್ ಹ್ಯಾಂಡ್ ಆಗಿ ಹಿಡಿಯಲು ಬಂದವನಿಗೆ ಶಾಕ್ ಕಾದಿತ್ತು.

ಸಂತೋಷ ಪತ್ನಿ ಪೊಲೀಸರನ್ನ ಮನೆಗೆ ಕರೆದುಕೊಂಡು ಬಂದು ಬಾಗಿಲು ಬಡಿದ್ದಾಳೆ. ಅವರು ತೆಗೆಯದಿದ್ದಾಗ ಬಾಗಿಲು ಒಡೆದು ಹೋಗಿ ನೋಡಿದ್ರೆ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ದೃಶ್ಯ ಕಂಡಿದೆ. ಈ ಬಗ್ಗೆ ಮೈಸೂರು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ. ಸಂತೋಷಗೆ ಇಬ್ಬರು ಮಕ್ಕಳಿದ್ದಾರೆ. ಸುಮಿತ್ರಾ ಹಾಗೂ ಸಿದ್ಧರಾಜು ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಇವರ ಈ ನಿರ್ಧಾರದಿಂದ ಮಕ್ಕಳಿಗೆ ತಂದೆ, ತಾಯಿ ಇಲ್ಲದಂತಾಗಿದೆ. ಇನ್ನೊಂದು ವಿಚಿತ್ರ ಅಂದ್ರೆ ಇವರು ಕೆಲಸ ಮಾಡ್ತಿದ್ದ ಕಾರ್ಖಾನೆಯಲ್ಲಿ ಸಿದ್ಧರಾಜು ಸಹ ವಾಚ್ ಮನ್ ಆಗಿದ್ದಾನೆ.


TAG


Leave a Reply

Your email address will not be published. Required fields are marked *

error: Content is protected !!