ಪ್ರಜಾಸ್ತ್ರ ಸುದ್ದಿ
ನವದೆಹಲಿ: ಗಡಿಯ ಲಡಾಕ್ ಪ್ರದೇಶದಲ್ಲಿ ನಿರ್ಮಾಣವಾಗಿರುವ ಉದ್ವಿಗ್ನ ಪರಿಸ್ಥಿತಿಯಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ-ಚೀನಾ ಕುರಿತು ಬಹುದೊಡ್ಡ ಚರ್ಚೆ ನಡೆದಿವೆ. ಪ್ರಧಾನಿ ಮೋದಿ, ಚೀನಾ ಭಾರತದ ಒಂದಿಂಚೂ ಭೂಮಿಯನ್ನ ಆಕ್ರಮಿಸಿಲ್ಲವೆಂದು ಹೇಳಿದ್ದಾರೆ. ಇದು ಸುಳ್ಳು. ಚೀನಾ ಭಾರತದ ಭೂ ಪ್ರದೇಶಕ್ಕೆ ಕಾಲಿಟ್ಟಿದೆ ಎಂದು ಕಾಂಗ್ರೆಸ್ ಯುವ ನಾಯಕ ರಾಹುಲ ಗಾಂಧಿ ಹೇಳಿದ್ದಾರೆ.
ಪ್ರಧಾನಿ ಮೋದಿ ಮಾತಿಗೂ ಸ್ಯಾಟ್ ಲೈಟ್ ಫೋಟೋಗೂ ಸಂಬಂಧವೇ ಇಲ್ಲ. ಮೋದಿ ಮಾತಿನಿಂದ ಚೀನಾಗೆ ಲಾಭವಾಗಿದೆ. ಈ ಬಗ್ಗೆ ದೇಶದ ಜನತೆಗೆ ಪ್ರಧಾನಿ ಸತ್ಯ ಹೇಳಬೇಕು ಎಂದು ರಾಹುಲ ಗಾಂಧಿ ಆಗ್ರಹಿಸಿದ್ದಾರೆ.