ಪ್ರಜಾಸ್ತ್ರ ಸುದ್ದಿ
ನವದೆಹಲಿ: ಕಳೆದ ಡಿಸೆಂಬರ್ 8ರಂದು ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಮೊದಲ ಸಿಡಿಎಸ್ ರಾವತ್, ಅವರ ಪತ್ನಿ ಸೇರಿದಂತೆ 14 ಸೇನಾಧಿಕಾರಿಗಳು ನಿಧನ ಹೊಂದಿದ್ದರು. ಅದರ ತನಿಖಾ ವರದಿ ಕಂಪ್ಲೀಟ್ ಆಗಿದ್ದು, ಇಂದು ಸರ್ಕಾರಕ್ಕೆ ಸಲ್ಲಿಕೆಯಾಗುವ ಸಾಧ್ಯತೆಯಿದೆ.
ಈ ದುರಂತಕ್ಕೆ ಸಂಬಂಧಿಸಿದಂತೆ ರಚಿಸಲಾಗಿರುವ ತ್ರಿ ಸೇವಾ ಸಮಿತಿ ಡಿಸೆಂಬರ್ 31ರೊಳಗೆ ವರದಿ ಸಲ್ಲಿಸಬೇಕಿತ್ತು. ಆದರೆ, ಅದು ತಡವಾಗಿ ಸಲ್ಲಿಕೆಯಾಗುತ್ತಿರುವುದಕ್ಕೆ ಕಾರಣಗಳು ತಿಳಿದು ಬಂದಿಲ್ಲ. ಬ್ಲಾಕ್ ಬಾಕ್ಸ್ ನಲ್ಲಿ ಕೊನೆಯದಾಗಿ ಯಾವ ಸಂದೇಶ ದಾಖಲಾಗಿದೆ ಅನ್ನೋದರ ಮೇಲೆ ಎಲ್ಲರ ಕುತೂಹಲವಿದೆ. ಏರ್ ಮಾರ್ಷಲ್ ಮನ್ವೇಂದ್ರ್ ಸಿಂಗ್ ನೇತೃತ್ವದ ತನಿಖಾ ತಂಡ ದುರಂತಕ್ಕೆ ಏನು ಕಾರಣ ಅನ್ನೋ ವರದಿ ಸಲ್ಲಿಸಿದೆ ಅನ್ನೋದು ತಿಳಿಯಬೇಕಿದೆ.