ಪ್ರಜಾಸ್ತ್ರ ಸುದ್ದಿ
ಪುಣೆ: ಖ್ಯಾತ ಸಮಾಜಸೇವಕಿ, ಸಾವಿರಾರು ಅನಾಥ ಮಕ್ಕಳನ್ನು ಸಾಕಿ, ಸಲುಹಿ ಅವರ ಭವಿಷ್ಯ ರೂಪಿಸಿದ ಮಹಾತಾಯಿ ಪದ್ಮಶ್ರೀ ಪುರಸ್ಕೃತೆ ಸಿಂಧೂತಾಯಿ ಸಪ್ಕಾಲ್(75) ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಸಿಂಧೂತಾಯಿ, ನಗರದ ಗ್ಯಾಲಕ್ಸಿ ಕೇರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಒಂದೂವರೆ ತಿಂಗಳ ಹಿಂದೆ ಹರ್ನಿಯಾ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಆದರೆ, ರಾತ್ರಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.