ಪ್ರಜಾಸ್ತ್ರ ಸುದ್ದಿ
ಸಿಂದಗಿ: ತಾಲೂಕಿನ ಬಂಕಲಗಿ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಶಾಲಾ ಶಿಸ್ತು ಸಮಿತಿ (ಎಸ್.ಡಿ.ಎಮ್.ಸಿ)ಯ ಅಧ್ಯಕ್ಷರಾಗಿ ನಾಗಪ್ಪ ಬಾಬು ತಳವಾರ ಎಂಬುವರು ಆಯ್ಕೆ ಆಗಿದ್ದಾರೆ. ಅಕ್ಟೋಬರ್ 1ರಂದು ನಡೆದ ಪೋಷಕರು ಸಭೆಯಲ್ಲಿ ಎಲ್ಲರೊಂದಿಗೆ ಚರ್ಚಿಸಿ ನಾಗಪ್ಪ ಬಾಬು ತಳವಾರ ಅವರನ್ನು ಅಧ್ಯಕ್ಷರಾಗಿ, ಶೇಕಮ್ಮ ಕುಂಬಾರ ಇವರನ್ನು ಉಪಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಶಾಲೆ ಮುಖ್ಯೋಪಾಧ್ಯಾಯರಾದ ಎಸ್.ಎಸ್ ಕುರನಳ್ಳಿ ಅವರು, ಸರ್ವ ಪೋಷಕರ ಒಪ್ಪಿಗೆ ಮೇರೆಗೆ ಸರ್ವಾನುಮತದಿಂದ ಇವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಪೋಷಕರ ಸಭೆಯಲ್ಲಿ ಶಾಲಾ ಸಿಬ್ಬಂದಿ ಸೇರಿದಂತೆ ಗ್ರಾಮದ ಮುಖಂಡರಾದ ದಯಾನಂದ ಮಳಗಿ, ಶಂಕರ ತಳವಾರ, ಕಾಸು ಪಡದಳ್ಳಿ, ಜಟ್ಟೆಪ್ಪ ಪಡದಳ್ಳಿ, ಚನ್ನಪ್ಪಗೌಡ ಪಾಟೀಲ, ರವಿ ಪಾಳೇದ, ಜಟ್ಟೆಪ್ಪ ಹರಿಜನ, ನಾಗಪ್ಪ ಬಂಡವಡ್ಡರ, ದತ್ತಪ್ಪ ಸುಂಗಠಾಣ, ಶಿವಶಂಕರ ಸುಂಗಠಾಣ, ರಾಜು ಸುಂಗಠಾಣ, ಪರಶುರಾಮ ಉಪ್ಪಾರ, ರುದ್ರಯ್ಯ ಹಿರೇಮಠ, ಶಿವಾನಂದ ಜಿವಣಗಿ, ಭಾಗಪ್ಪ ಕನ್ನೊಳ್ಳಿ ಸೇರಿದಂತೆ ಇನ್ನೂ ಅನೇಕ ಉಪಸ್ಥಿತರಿದ್ದರು.