ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಹೆಲಿಕಾಪ್ಟರ್ ಅಪಘಾತದಲ್ಲಿ ಇತ್ತೀಚೆಗೆ ಸಿಡಿಎಸ್ ಬಿಪಿನ್ ರಾವತ್ ಸೇರಿ 13 ಜನ ಸೇನಾಧಿಕಾರಿಗಳನ್ನು ಕಳೆದುಕೊಂಡಿದ್ದೇವೆ. ಪರಿಷತ್ ಚುನಾವಣೆಯ ಮತದಾನದ ವೇಳೆ ಸಿಎಂ ಬೊಮ್ಮಾಯಿ, ಕೇಂದ್ರ ಸಚಿವ ಜೋಶಿ ಇದ್ದ ವಿಮಾನ ಸಹ ಹವಾಮಾನದ ಸಮಸ್ಯೆ ಎದುರಿಸಿ ಅರ್ಧಗಂಟೆ ಆಗಸದಲ್ಲಿಯೇ ಹಾರಾಡಿ ನಂತರ ಲ್ಯಾಂಡ್ ಆಗಿತ್ತು. ಈಗ ಮತ್ತೊಂದು ಘಟನೆ ನಡೆದಿದೆ.
ಹೌದು, ನಟಿ ಹಾಗೂ ಶಾಸಕಿ ರೋಜಾ ಸೇರಿ 70 ಜನರಿಂದ ವಿಮಾನ ತಾಂತ್ರಿಕ ಕಾರಣಕ್ಕೆ ಬೆಂಗಳೂರಿಗೆ ಬಂದು ಲ್ಯಾಂಡ್ ಆಗಿದೆ. ಈ ಇಂಡಿಗೋ ವಿವಮಾನ ಆಂಧ್ರದ ಚಿತ್ತೂರು ಜಿಲ್ಲೆಯ ರೆನಿಗುಂಟದಲ್ಲಿ ಲ್ಯಾಂಡ್ ಆಗಬೇಕಿತ್ತು. ಆದರೆ, ತಾಂತ್ರಿಕ ಕಾರಣಕ್ಕೆ ಬೆಂಗಳೂರಿಗೆ ಬಂದಿದೆ. ಇಲ್ಲಿಗೆ ಬಂದ ಮೇಲೂ ಬಾಗಿಲು ಓಪನ್ ಆಗದೆ ಪ್ರಯಾಣಿಕರು ಪರದಾಟ ನಡೆಸಿದ ಘಟನೆ ನಡೆದಿದೆ.