ನವದೆಹಲಿ: ನೆರೆಯ ಪಾಕಿಸ್ತಾನಕ್ಕೆ ಜಮ್ಮು ಕಾಶ್ಮೀರ ಗವರ್ನರ್ ಸತ್ಯಾಪಾಲ ಮಲಿಕ್ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ಉಗ್ರರ ನೀತಿಯಲ್ಲಿ ನೀವು ಬದಲಾಗದೆ ಹೋದ್ರೆ, ಉಗ್ರರನ್ನ, ಅವರ ಶಿಬಿರಗಳನ್ನ ನಾವೇ ಹೀಗೆ ದ್ವಂಸ ಮಾಡುತ್ತೇವೆ ಅಂತಾ ಹೇಳಿದ್ದಾರೆ.
ನವೆಂಬರ್ 1ರಿಂದ ಜಮ್ಮು ಕಾಶ್ಮೀರ ಅಧಿಕೃತವಾಗಿ ಕೇಂದ್ರಾಡಳಿತ ಪ್ರದೇಶವಾಗಲಿದೆ ಅಂತಾ ಇದೇ ವೇಳೆ ತಿಳಿಸಿದ್ದಾರೆ. ಭಾನುವಾರ ಭಾರತೀಯ ಸೇನೆ ಏನು ಮಾಡಿತೋ, ಅದನ್ನ ನಾವು ಮತ್ತೆ ಮಾಡಬೇಕಾಗುತ್ತೆ ಅಂತಾ ಎಚ್ಚರಿಸಿದ್ದಾರೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಾಲ್ಕು ಉಗ್ರರ ಶಿಬಿರಗಳನ್ನ ಭಾರತೀಯ ಸೇನೆ ಉಡೀಸ್ ಮಾಡಿತ್ತು.